ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಮದುವೆ ಖರ್ಚೆಲ್ಲ ಚಪ್ಪರದಲ್ಲೇ.

ಕೆಲವು ಸಲ ನಾವು ಮಾಡಬೇಕಾದ ಮುಖ್ಯ ಕೆಲಸಕ್ಕಿಂತ ಅದರ ಜೊತೆಗಿರುವ ಅಡ್ಡ ಕೆಲಸಗಳೇ ಹೆಚ್ಚು ಶ್ರಮ, ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ ನಾವು ಅಧ್ಯಾಪಕರು ತರಗತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಬಂದು ಕೂರುವುದು, ಸ್ಥಳವಿಲ್ಲ, ಬೆಂಚಿಲ್ಲ ಎಂದು ಗದ್ದಲ ಮಾಡುವುದು, ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ತಾರಾಡುತ್ತಾ ಸ್ಥಳ ಹುಡುಕುವುದು ಮಾಡುತ್ತಿದ್ದರೆ ಪಾಠ ಶುರು ಮಾಡುವುದೇ ಕಷ್ಟವಾಗುತ್ತದೆ. ಅಮೂಲ್ಯವಾದ ಸಮಯವು ಹೀಗೆ ವ್ಯರ್ಥವಾದ ಗಲಗು ಗದ್ದಲಗಳಲ್ಲಿ ಹೋಗುವಾಗ ನಾವು ಅಧ್ಯಾಪಕರು ಈ ಗಾದೆಮಾತು ನೆನಪಿಸಿಕೊಂಡು ಪೇಚಾಡುತ್ತೇವೆ! ಈ ಗಾದೆಮಾತಿನಿಂದ ನಾವು ಕಲಿಯಬೇಕಾದ […]

ಹಳೆ ಚಪ್ಪಲಿ ಹೊಸ ಹೆಂಡತಿ ಕಚ್ಚೊಲ್ಲ.

ಲೋಕಾನುಭವದ ಮಾತು ಇದು. ಹಾಕಿ ಹಾಕಿ ಹಳೆಯದಾದ ಚಪ್ಪಲಿ ಪಾದಕ್ಕೆ ತುಂಬ ರೂಢಿಯಾಗಿರುವುದರಿಂದ ಅದು ಪಾದವನ್ನು ಕಚ್ಚಿ ಚುಚ್ಚಿ ನೋಯಿಸುವುದಿಲ್ಲ. ಹೀಗೆಯೇ ಹೊಸದಾಗಿ ಮದುವೆಯಾದ ಹೆಂಡತಿ ಇನ್ನೂ ಎಲ್ಲ ಅಪರಿಚಿತವಾಗಿರುವುದರಿಂದ ಒರಟಾಗಿ ನಡೆದುಕೊಳ್ಳವುದಿಲ್ಲ. ಆದರೆ ಹೆಂಡತಿಗೆ ಗಂಡನ ಸ್ವಭಾವ ಮತ್ತು ಅತ್ತೆ ಮನೆ ರೂಢಿಯಾದ ಮೇಲೆ ಅವಳು ತನ್ನ ಕೋಪ, ಅಸಾಮಾಧಾನಗಳನ್ನು ಪ್ರಕಟವಾಗಿ ತೋರಿಸಲು ಹಿಂಜರಿಯುವುದಿಲ್ಲ. ವಿಚಿತ್ರವೆಂದರೆ ಚಪ್ಪಲಿಯ ವಿಷಯದಲ್ಲಿ ಇದು ಉಲ್ಟಾ ಆಗಿರುತ್ತದೆ. ಚಪ್ಪಲಿ ಹೊಸದಾಗಿದ್ದಾಗ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಪಾದವನ್ನು ಕಚ್ಚುತ್ತದೆ. ಈ ಗಾದೆಮಾತು ಜೀವನಾನುಭವನ್ನು […]

ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು.

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತಿದು. ಇದನ್ನು ಶಾಲಾ ತರಗತಿಗಳಲ್ಲಿ ಅಧ್ಯಾಪಕರು ಹೆಚ್ಚಾಗಿ ಬಳಸುತ್ತಾರೆ. ಚೆನ್ನಾಗಿ ಓದಿ ಒಳ್ಳೆಯ ಅಂಕ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಬರುಬರುತ್ತಾ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಕಡಿಮೆ ಅಂಕ ತೆಗೆದುಕೊಳ್ಳಲಾರಂಭಿಸಿದಾಗ ಅಧ್ಯಾಪಕರು `ಏನಿದು? ಏನಾಯ್ತು ನಿಂಗೆ?  ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂದ ಹಾಗೆ ಆಯ್ತು ನೋಡು’ ಎಂದು ವಿದ್ಯಾರ್ಥಿಯನ್ನು ಗದರುತ್ತಾರೆ. ನಮ್ಮ ಜೀವನ ವಿಧಾನದ ನಂಬಿಕೆಗಳಲ್ಲಿ ಕುದುರೆ ಅನ್ನುವುದು ಕತ್ತೆಗಿಂತ ಉತ್ತಮ ಎಂಬ ಭಾವನೆ ಇದೆ. ಕುದುರೆಯ ಎತ್ತರ, ಅಂದ […]

ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ.

ಜೀವನದಲ್ಲಿ ಕೆಲವೊಮ್ಮೆ ಅವಘಡಗಳು, ಅಘಟಿತಗಳು ಘಟಿಸುತ್ತವೆ, ಕಷ್ಟ ನಷ್ಟಗಳು ಸಂಭವಿಸುತ್ತವೆ. ಆಗ ನಮಗೆ ಬೇಸರವಾಗುವುದು ಸಹಜ. ನಮ್ಮ ಮನಸ್ಸು ಆಗ ಮತ್ತೆ ಮತ್ತೆ ಆದ ನಷ್ಟದ ಬಗ್ಗೆ ಕೊರಗುತ್ತಾ, ಹಳಹಳಿಸುತ್ತಾ ಇರುತ್ತದೆ. ಆದರೆ ಆಗಿ ಹೋದದ್ದರ ಬಗ್ಗೆ ವಿಪರೀತ ಕೊರಗುವುದರಿಂದ ಪ್ರಯೋಜನವೇನೂ ಆಗುವುದಿಲ್ಲ. ಮತ್ತಷ್ಟು ಬೇಸರವಾಗುತ್ತದೆ ಅಷ್ಟೆ.

ಕುಂಬಾರಂಗೆ ವರುಷ, ದೊಣ್ಣೆಗೆ ನಿಮಿಷ.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತಿದು. ಒಂದು ಮಡಕೆಯನ್ನು ಮಾಡಲು ಕುಂಬಾರ ಅನೇಕ ದಿನಗಳ ಕಾಲ ಕಷ್ಟ ಪಡಬೇಕು. ಸರಿಯಾದ ಮಣ್ಣು ಹುಡುಕಿ ತಂದು, ನೀರು ಹಾಕಿ, ಕಲಸಿ, ತುಳಿತುಳಿದು ಚೆನ್ನಾಗಿ ಹದ ಮಾಡಿ, ಆ ಮೇಲೆ ತನ್ನ ತಿಗರಿಯಲ್ಲಿ ಮಡಕೆಯ ರೂಪಕ್ಕೆ ತಂದು, ನಂತರ ಅದನ್ನು ಒಣಗಿಸಿ, ಸುಟ್ಟು, ಗಿರಾಕಿಗಳು ಬರುವ ತನಕ ಅದು ಒಡೆಯದಂತೆ ಕಾಪಾಡಿಕೊಂಡು .

ಹೂವನ್ನು ಕೊಟ್ಟು ಮುಡಿ, ಹಣ್ಣನ್ನು ಹಂಚಿ ತಿನ್ನು.

ನಮ್ಮ ಗ್ರಾಮಸ್ಥ ಜನಪದರು ಜನರ ಪರಸ್ಪರ ಹೊಂದಾಣಿಕೆ ಮತ್ತು ಸಹಬಾಳ್ವೆಗಾಗಿ ರೂಪಿಸಿರುವ ಒಂದು ಸುಂದರ ಅಭ್ಯಾಸವನ್ನು ಮೇಲಿನ ಗಾದೆಮಾತು ಹೇಳುತ್ತದೆ. ಪ್ರಕೃತಿ ನಮಗೆ ಕೊಟ್ಟ ಅತ್ಯಂತ ಆಹ್ಲಾದಕರ ಉಡುಗೊರೆಗಳೆಂದರೆ ಹೂವು ಮತ್ತು ಹಣ್ಣು. ಇವುಗಳ ಆನಂದವನ್ನು ಸವಿಯುವಾಗ ನಾವೊಬ್ಬರೇ ಸವಿಯದೆ ಸುತ್ತಮುತ್ತ ಇರುವ ಮನೆಮಂದಿ, ಬಳಗದವರು, ಸ್ನೇಹಿತರೊಂದಿಗೆ ಹಂಚಿಕೊAಡರೆ ಆ ಸವಿ ದುಪ್ಪಟ್ಟಾಗುತ್ತದೆ.

ಸಿಟ್ಟಿಗೆ ಕೊಯ್ದ ಮೂಗು ಶಾಂತಿಗರ‍್ತದ?

ಸಿಟ್ಟು. ಕೋಪ. ರೋಷ, ಕ್ರೋಧ, ರೊಚ್ಚು, ಕನಲುವಿಕೆ ….. ಯಾವ ಹೆಸರಿಂದ ಕರೆದರೇನು, ಈ ಭಾವದ ಪರಿಚಯ ಇಲ್ಲದ ಮನುಷ್ಯರೇ ಇಲ್ಲ. ನಮಗೇ ಕೋಪ ಬರುವ ಸಂದರ್ಭಗಳು ಅಥವಾ ಬೇರೆಯವರು ನಮ್ಮ ಮೇಲೆ ಕೋಪಗೊಂಡಾಗ ಅನುಭವಿಸುವ ಕಸಿವಿಸಿ, ನೋವು, ಭಯ ಇವೆಲ್ಲ ನಮಗೆ ಗೊತ್ತು.

ಹೆಣ್ಣಿಲ್ಲದ ಮನೆ ಹಣ್ಣಿಲ್ಲದ ಮರ

ಕನ್ನಡ ಗಾದೆಮಾತುಗಳ ರಾಶಿಯನ್ನು ಗಮನಿಸಿದಾಗ ಕಂಡುಬರುವ ಒಂದು ಅಪರೂಪದಸ್ತ್ರೀಪರ ಗಾದೆ ಮಾತಿದು. ಪುರುಷಪ್ರಧಾನ ವ್ಯವಸ್ಥೆಯಿರುವ ಸಮಾಜಗಳಲ್ಲಿನ ಭಾಷೆ ಹಾಗೂ ಗಾದೆಮಾತುಗಳು ಕೂಡ ಸ್ತ್ರೀವಿರೋಧಿಯಾಗಿರುವುದನ್ನು ಗಮನಿಸುವಾಗ ಈ ಗಾದೆಮಾತು ಹೆಣ್ಣಿನ ಬಗ್ಗೆ ಒಳ್ಳೆಯ ಭಾವನೆ ಪ್ರಕಟಿಸಿರುವುದು ಸಮಾಧಾನದ ವಿಷಯವಾಗಿದೆ.

ಮಾಡು, ಇಲ್ಲ, ಸುಮ್ಮನೆ ನೋಡು

ಯಾವುದೇ ಒಂದು ಕೆಲಸ ಆಗಬೇಕೆಂದರೆ ಒಂದೋ ನಾವು ಮಾಡಬೇಕು, ಇಲ್ಲವೇ ಮಾಡುತ್ತಿರುವವರ ಬಗ್ಗೆ ಟೀಕೆ ಮಾಡದೆ ಸುಮ್ಮನೆ ನೋಡಬೇಕು. ನಮ್ಮಲ್ಲಿ ಕೆಲವರು ತಾವೂ ಮಾಡುವುದಿಲ್ಲ, ಕೆಲಸ ಮಾಡುತ್ತಿರುವವರನ್ನೂ ಮಾಡಲು ಬಿಡುವುದಿಲ್ಲ. ತಮ್ಮ ಕಟು ಟೀಕೆಗಳಿಂದ ಅವರ ಮನಸ್ಸನ್ನು ನೋಯಿಸಿ ಕೆಲಸ ಮಾಡುವಂತಹ ಹುಮ್ಮಸ್ಸಿಗೆ ಭಂಗ ತರುತ್ತಾರೆ.

ಎಲ್ಲರ ಮನೆ ದೋಸೆನೂ ತೂತೇ.

ಯಾರ ಮನೆಯಲ್ಲಿ ದೋಸೆ ಮಾಡಿದರೂ ಅದು ಬೇಯುವಾಗ ಅದರಲ್ಲಿ ಗಾಳಿಯ ಕಾರಣದಿಂದ ತೂತುಗಳು ಆಗಿಯೇ ಆಗುತ್ತವೆ. ನಮ್ಮ ಮನೆಯ ದೋಸೆಯಲ್ಲಿ ತೂತು ಇಲ್ಲ ಎನ್ನಲಾಗುವುದೇ? ಹಾಗೆಯೇ ಸಮಸ್ಯೆಗಳು, ಬಿಕ್ಕಟ್ಟುಗಳು, ಭಿನ್ನಾಭಿಪ್ರಾಯ-ಜಗಳಗಳು ಮನುಷ್ಯರು ಕೂಡಿ ಜೀವಿಸುವ ಎಲ್ಲ ಸಂದರ್ಭ, ಸನ್ನಿವೇಶಗಳಲ್ಲೂ ಇರುತ್ತವೆ.

Page 18 of 20

Kannada Sethu. All rights reserved.