ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಮಾಡು, ಇಲ್ಲ, ಸುಮ್ಮನೆ ನೋಡು

ಯಾವುದೇ ಒಂದು ಕೆಲಸ ಆಗಬೇಕೆಂದರೆ ಒಂದೋ ನಾವು ಮಾಡಬೇಕು, ಇಲ್ಲವೇ ಮಾಡುತ್ತಿರುವವರ ಬಗ್ಗೆ ಟೀಕೆ ಮಾಡದೆ ಸುಮ್ಮನೆ ನೋಡಬೇಕು. ನಮ್ಮಲ್ಲಿ ಕೆಲವರು ತಾವೂ ಮಾಡುವುದಿಲ್ಲ, ಕೆಲಸ ಮಾಡುತ್ತಿರುವವರನ್ನೂ ಮಾಡಲು ಬಿಡುವುದಿಲ್ಲ. ತಮ್ಮ ಕಟು ಟೀಕೆಗಳಿಂದ ಅವರ ಮನಸ್ಸನ್ನು ನೋಯಿಸಿ ಕೆಲಸ ಮಾಡುವಂತಹ ಹುಮ್ಮಸ್ಸಿಗೆ ಭಂಗ ತರುತ್ತಾರೆ.

ಎಲ್ಲರ ಮನೆ ದೋಸೆನೂ ತೂತೇ.

ಯಾರ ಮನೆಯಲ್ಲಿ ದೋಸೆ ಮಾಡಿದರೂ ಅದು ಬೇಯುವಾಗ ಅದರಲ್ಲಿ ಗಾಳಿಯ ಕಾರಣದಿಂದ ತೂತುಗಳು ಆಗಿಯೇ ಆಗುತ್ತವೆ. ನಮ್ಮ ಮನೆಯ ದೋಸೆಯಲ್ಲಿ ತೂತು ಇಲ್ಲ ಎನ್ನಲಾಗುವುದೇ? ಹಾಗೆಯೇ ಸಮಸ್ಯೆಗಳು, ಬಿಕ್ಕಟ್ಟುಗಳು, ಭಿನ್ನಾಭಿಪ್ರಾಯ-ಜಗಳಗಳು ಮನುಷ್ಯರು ಕೂಡಿ ಜೀವಿಸುವ ಎಲ್ಲ ಸಂದರ್ಭ, ಸನ್ನಿವೇಶಗಳಲ್ಲೂ ಇರುತ್ತವೆ.

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು

ನಮ್ಮ ಮನಸ್ಸು ನಿಶ್ಚಿಂತೆಯಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುವ ಗಾದೆಮಾತಿದು. ಸಂತೆ ಎಂದರೆ ತುಂಬ ಗೌಜಿ ಗದ್ದಲ ಇರುವ ಜಾಗ. ಅಲ್ಲಿ ನಿದ್ದೆ ಮಾಡುವುದು ಎಂದರೆ ಸಾಮಾನ್ಯವಾದ ಮಾತಲ್ಲ. ಆದರೆ ಮನುಷ್ಯನ ಮನಸ್ಸಿನಲ್ಲಿ ಯಾವುದೇ ಚಿಂತೆ ಇಲ್ಲದಿದ್ದಾಗ ಅವನು ಸಂತೆಯಂತಹ ಗಲಗಲ ಗಲಾಟೆಯ ಜಾಗದಲ್ಲೂ ನಿದ್ದೆ ಮಾಡಬಲ್ಲ.

ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

ಹಳ್ಳಿಗರ ಬಾಯಲ್ಲಿ ಆಗಾಗ ಕೇಳಿ ಬರುವ ಗಾದೆಮಾತಿದು. ವಯಸ್ಸಾದವರು, ತಮಗೆ ಸಾವು ಸನ್ನಿಹಿತವಾಗಿದೆ ಎಂಬ ಭಾವನೆ ಬಂದಾಗ ಬಳಸುವ ಮಾತು. ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಹಸಿರು ಕಾಡುಗಳು ವಿಪುಲವಾಗಿದ್ದಾಗ ಯಾರಾದರೂ ಸತ್ತರೆ ಅವರ ದೇಹವನ್ನು ಊರಿನ ಪಕ್ಕದಲ್ಲಿದ್ದ ಕಾಡಿನಲ್ಲಿ ಹೂಳುತ್ತಿದ್ದರು ಅಥವಾ ಸುಡುತ್ತಿದ್ದರು.

ಊರು ಉಪಕಾರ ಅರೀದು, ಹೆಣ ಶೃಂಗಾರ ಅರೀದು.

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಊರ ಜನರಿಗೆ ಉಪಕಾರ ಮಾಡುವವರು, `ತಾವು ಊರಿಗೋಸ್ಕರ ಸೇವೆ, ತ್ಯಾಗ ಮಾಡುತ್ತಿದ್ದೇವೆ ಎಂಬ ಭಾವನೆ ಇಟ್ಟುಕೊಂಡಿದ್ದು, ತಮ್ಮಿಂದ ಉಪಕಾರ ಪಡೆದ ಜನ ಎಂದಾದರೂ ತಮ್ಮನ್ನು ನೆನೆಪಿಸಿಕೊಳ್ಳಬಹುದು ಎಂಬ ಒಳ ಆಸೆಯನ್ನು ಇಟ್ಟುಕೊಂಡಿರುತ್ತಾರೆ, ಆದರೆ ಎಷ್ಟೋ ಸಲ ಜನ ಆ ಘಳಿಗೆಯಲ್ಲಿ ಉಪಕಾರ ಮಾಡಿಸಿಕೊಂಡು ತುಂಬ ಕೃತಜ್ಞತೆ ತೋರುವವರಂತೆ ಕಂಡರೂ,

ಇರ್‍ಲಾರ್‍ದೆ ಇರುವೆ ಬಿಟ್ಕೊಂಡ್ರು.

ಕನ್ನಡದ ಒಂದು ಸ್ವಾರಸ್ಯಕರ ಗಾದೆ ಮಾತು ಇದು. ಸುಮ್ಮನೆ ಕುಳಿತಿದ್ದವರು ಹಾಗೆಯೇ ಸುಮ್ಮನಿರದೆ, ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ಇರುವೆಗಳನ್ನು ಮುಟ್ಟಿ ಮೈಮೇಲೆ ಬಿಟ್ಟುಕೊಂಡರೆ ಅವು ಕಚ್ಚದೆ ಇರುತ್ತವೆಯೇ? ಖಂಡಿತ ಕಚ್ಚುತ್ತವೆ. ಇದೇ ರೀತಿಯಲ್ಲಿ ಮನುಷ್ಯರು ಅನಗತ್ಯವಾಗಿ ಜಗಳ ಆಡಿದಾಗ, ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಾಗ ಈ ಮಾತನ್ನು ಬಳಸುತ್ತಾರೆ.

ಕನ್ನಡ ಬರಿ ಕರ್ನಾಟಕವಲ್ಲ ಅಸೀಮ ಅದು ಅದಿಗಂತ; ದೇವರು ಕೇವಲ ವಿಗ್ರಹವಲ್ಲ ಅಂತರ್ಭಾವ ಅನಂತ

ಕನ್ನಡದ ನಿತ್ಯೋತ್ಸವ ಕವಿ ಶ್ರೀ ಕೆ.ಎಸ್.ನಿಸಾರ್ ಅಹಮದ್ ಅವರ `ಕನ್ನಡವೆಂದರೆ ಬರಿ ನುಡಿಯಲ್ಲ ಎಂಬ ಪ್ರಸಿದ್ಧ ಭಾವಗೀತೆಯಲ್ಲಿ ಬರುವ ಸಾಲುಗಳಿವು. `ಕರ್ನಾಟಕವೆಂದರೆ ಕೇವಲ ಭೌಗೋಳಿಕ ಗಡಿಗಳಲ್ಲ, ಅದು ಮನಸ್ಸಿನಲ್ಲಿರುವ ಕನ್ನಡವೆಂಬ ಭಾವ, ಎಲ್ಲಿದ್ದರೂ ಹೇಗಿದ್ದರೂ ನಾವು ಕನ್ನಡಿಗರಾಗಿರಬಹುದು ಎಂಬುದನ್ನು ಮನದಟ್ಟು ಮಾಡಿಸುವ ಸಾಲುಗಳಿವು.

ಕವಿನುಡಿ – ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.

ಕುವೆಂಪು ಅವರು ಬರೆದ ಸಾಲಿದು. `ದೋಣಿ ಸಾಗಲಿ ಮುಂದೆ ಹೋಗಲಿ ಗೇಯಕವಿತೆಯ(ಹಾಡಲಾಗುವ ಕವಿತೆ) ಕೊನೆಯ ಸಾಲು. ನಿನ್ನೆಯ ಚಿಂತೆ, ನಾಳಿನ ಚಿಂತೆ ನಮ್ಮ ಇಂದಿನ ಸಮಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇವತ್ತು ನಮ್ಮ ಕೈಯಲ್ಲಿ ಏನಿದೆಯೋ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಿನ್ನೆಯನ್ನು ನಾವು ಬದಲಾಯಿಸಲಾಗುವುದಿಲ್ಲ,

ಕವಿನುಡಿ  “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ”

ಕನ್ನಡದ ನವ್ಯಕಾವ್ಯದ ಪ್ರವರ್ತಕರು ಎಂದು ಹೆಸರಾದ ಶ್ರೀ ಎಂ.ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು ಭಾವಗೀತೆಯನ್ನು ಕೇಳದ ಕನ್ನಡಿಗರು ಅಪರೂಪ ಅನ್ನಿಸುತ್ತೆ. ಬಹುಶಃ ಕನ್ನಡದ ಅತ್ಯಂತ ಪ್ರಸಿದ್ಧ ಭಾವಗೀತೆಗಳಲ್ಲಿ ಇದೂ ಒಂದು. ಈ ಭಾವಗೀತೆಯ ಕೊನೆಯ ಸಾಲು ಮೇಲಿನದು. ಭೂಮಿಯ ಮೇಲೆ ಸುಖಭೋಗಗಳ ನಡುವೆ ಬದುಕುತ್ತಿದ್ದರೂ ಮನಸ್ಸು ಎಲ್ಲೋ ಓಡುವ, ಏನನ್ನೋ ಹುಡುಕುವ ಬಗ್ಗೆ ಈ ಕವಿತೆ ಮಾತಾಡುತ್ತದೆ.

ಬೆಟ್ಟ ಅಗೆದು ಇಲಿ ಹಿಡಿದಂಗೆ

ಕೆಲವು ಸಲ ನಾವು ಜೀವನದಲ್ಲಿ ತುಂಬ ಪರಿಶ್ರಮ ಹಾಕಿದರೂ ಪ್ರತಿಫಲವು ನಾವು ಎಣಿಸಿದಷ್ಟು ಬರುವುದಿಲ್ಲ. ಬೆಟ್ಟ ತುಂಬ ದೊಡ್ಡದು, ಅದನ್ನು ಅಗೆಯುವುದು ಸಾಮಾನ್ಯವಾದ ಮಾತಲ್ಲ. ಕೆಲವರು ಸಂಪತ್ತು, ನಿಧಿ ಸಿಗುತ್ತದೆ ಎಂಬ ಆಸೆಯಿಂದ ಬೆಟ್ಟವನ್ನು ಅಗೆಯುವುದುಂಟು. ಆದರೆ ಹಾಗೆ ಅಷ್ಟು ದೊಡ್ಡದಾಗಿರುವ ಬೆಟ್ಟವನ್ನು ಅಗೆದ ಮೇಲೆ ಸಿಕ್ಕಿದ್ದು ಒಂದು ಇಲಿ ಎಂದಾಗ ಅಗೆದವರಿಗೆ `ನಮ್ಮ ಶ್ರಮ ವ್ಯರ್ಥವಾಯಿತಲ್ಲ ಎಂಬ ಭಾವನೆ ಬರುವುದು ಸಹಜ. ಆದರೆ ಜಿವನದಲ್ಲಿ ಹೀಗಾಗುವುದು ಅಪರೂಪವೇನಲ್ಲ. ಆದುದರಿಂದ ನಾವು ಯಾವುದಾದರೂ ಕೆಲಸಕ್ಕೆ ಕೈ ಹಾಕುವಾಗ […]

Page 18 of 19

Kannada Sethu. All rights reserved.