ಕನ್ನಡ ಗಾದೆಮಾತು – ಸಾಲ ಕೊಟ್ಟು ಸ್ನೇಹ ಕಳೆದುಕೊಂಡಂಗೆ. 

ನಾವು ಯಾರಿಗಾದರೂ ಸಾಲ ಕೊಟ್ಟರೆ ಅವರು ಅದನ್ನು ಮರಳಿಸುವ ತನಕ ನಮ್ಮ‌ ಮನಸ್ಸು ಸಮಾಧಾನವಾಗಿರುವುದಿಲ್ಲ. ನಾವು ಅದನ್ನು ಮರಳಿಸುವಂತೆ ಅವರ ಬಳಿ ಕೇಳಿದಾಗ ಕೆಲವರು ಕಾಳಜಿ, ಕೃತಜ್ಞತೆಗಳಿಂದ, ಇನ್ನು ಕೆಲವರು ಗೊಣಗಿಕೊಂಡು ಹಣವನ್ನು ಮರಳಿಸಬಹುದು, ಇನ್ನು ಕೆಲವು ಭಂಡರು ಹಣವನ್ನು ಮರಳಿಸದೆಯೂ ಇರಬಹುದು. ಆದರೆ ನಾವು ಇದೇ ಸಾಲವನ್ನು ಸ್ನೇಹಿತರಿಗೆ ಕೊಟ್ಟೆವೆಂದರೆ ಭಾರೀ ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಹಣವನ್ನು ವಾಪಸ್ ಕೇಳದಿದ್ದರೆ ಹಣವನ್ನು  ಕಳೆದುಕೊಳ್ಳಬೇಕಾಗುತ್ತೆ, ವಾಪಸ್ ಕೇಳಿದರೆ ಸ್ನೇಹಿತನಿಗೆ ಇರಿಸುಮುರಿಸಾಗುವುದರಿಂದ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹುಶಃ ಇದಕ್ಕಾಗಿಯೇ ಈ […]

“ಅಯ್ಯೋ… ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ‌ ಮೇಡಂ”

ಮೊನ್ನೆ ಬ್ರೆಡ್ಡು, ಸಾದಾ ಕೇಕುಗಳನ್ನು ಕೊಳ್ಳಲು ಒಂದು ಬೇಕರಿಗೆ ಹೋಗಿದ್ದೆ. ನಮ್ಮ ಹಂಪಿನಗರದಲ್ಲಿರುವ ಒಂದು ‘ಹಾಸನ ಅಯ್ಯಂಗಾರ್’ ಬೇಕರಿ ಅದು. ನನಗೆ ಆ ತಿನಿಸುಗಳನ್ನು ಕೊಟ್ಟ  ಹುಡುಗನನ್ನು “ಏನಪ್ಪಾ, ಇವು ತಾಜಾ ಇದಾವಾ?” ಎಂದು ಕೇಳಿದೆ. ಅವನಿಗೆ ತುಂಬ ಗಾಬರಿಯಾಯಿತು! “ಅಯ್ಯೋ. ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ ಮೇಡಂ” ಎಂದು ಆತಂಕದಿಂದ ಹೇಳಿದ. ಸಾಮಾನ್ಯವಾಗಿ ಜನ ‘ಫ್ರೆಷ್’ ಅನ್ನುವ ಪದ ಬಳಸ್ತಾರಲ್ಲ, ಅದರ ಬದಲು ನಾನು ‘ತಾಜಾ’ ಎಂಬ ಪದ ಬಳಸಿದ್ದು ಅವನಿಗೆ ಹೀಗೆ ಗಾಬರಿ […]

Isenthalpic process

ಐಸೆನ್ಥಾಲ್ಪಿಕ್ ಪ್ರೋಸೆಸ್ – ಸಮಶಾಖ ಪ್ರಮಾಣ  ಪ್ರಕ್ರಿಯೆ – ಶಾಖಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಡೆಯುವ ಪ್ರಕ್ರಿಯೆ, ಅಂದರೆ, ಇದರಲ್ಲಿನ ಒಟ್ಟು ಉಷ್ಣ ಶಕ್ತಿಯು ಸ್ಥಿರವಾಗಿಯೇ ಉಳಿಯುತ್ತದೆ.

Irreversible process

ಇರ್ರಿವರ್ಸೆಬಲ್ ಪ್ರೋಸೆಸ್ – ಹಿಮ್ಮರಳಿಸಲಾಗದ ಪ್ರಕ್ರಿಯೆ – ಕ್ರಿಯೆ ನಡೆಯುವಾಗ ಯಾವ ಹಂತಗಳ ಸರಣಿ‌ ಜಾರಿಯಾಗಿತ್ತೋ ಅದೇ ಸರಣಿಯಲ್ಲಿ ತನ್ನ ಮೂಲಸ್ಥಿತಿಗೆ ಮರಳಲಾಗದ ಪ್ರಕ್ರಿಯೆ. ಎಲ್ಲ ನಿಜ ಕ್ರಿಯೆಗಳೂ ತಮ್ಮ ಗುಣಸ್ವಭಾವದಲ್ಲಿ ಮರಳಿಸಲಾಗದ ಪ್ರಕ್ರಿಯೆಗಳೇ ಆಗಿರುತ್ತವೆ.

 Ion sound

ಅಯಾನ್ ಸೌಂಡ್ – ವಿದ್ಯುದಣು ಶಬ್ಧ – ಪ್ಲಾಸ್ಮಾದಲ್ಲಿ ವಿದ್ಯುದಣುಗಳ ಉದ್ದುದ್ದ ಆಂದೋಲನಗಳಿಂದ ತುಂಬ ಕಡಿಮೆ ತರಂಗಾಂತರವಿರುವ ಅಲೆಗಳು ಹುಟ್ಟುತ್ತವೆ‌. ಇವನ್ನು ವಿದ್ಯುದಣು ಶಬ್ಧ ಎನ್ನುತ್ತಾರೆ‌.

Ionosphere

ಅಯಾನೋಸ್ಫಿಯರ್ – ವಿದ್ಯುದಣು ಮಂಡಲ – ಭೂಮಿಯ ಹವಾಮಾನದ ಎತ್ತರದ ಮಟ್ಟಗಳಲ್ಲಿ ರೇಡಿಯೋ ಅಲೆಗಳನ್ನು ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆಗಳಿವು)  ಪ್ರತಿಫಲಿಸುವ ಹಾಗೂ ತನ್ಮೂಲಕ ರೇಡಿಯೋ ಪ್ರಸಾರವನ್ನು ಸಾಧ್ಯ ಮಾಡುವ ಪ್ರದೇಶ.

Ionizing radiation

ಅಯಾನೈಸಿಂಗ್ ರೇಡಿಯೇಷನ್ – ವಿದ್ಯುದಣು ನಿರ್ಮಾಣ ವಿಕಿರಣ – ಒಂದು ವ್ಯವಸ್ಥೆಯಲ್ಲಿ ವಿದ್ಯುದಣು ನಿರ್ಮಾಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಹೊಂದಿರುವಂತಹ ವಿಕಿರಣ.

ಕನ್ನಡ ಗಾದೆಮಾತು – ನಮ್ಮೋರಿಗೆ ಮುಳುಗಿ ಬಾ ಸಟ್ಟುಗ, ಅನ್ನಿಗರಿಗೆ ತೇಲಿ ಬಾ ಸಟ್ಟುಗ.

ವಿಚಿತ್ರ ಅನ್ನಿಸಿದರೂ  ಕುಟುಂಬಗಳಲ್ಲಿ  ನಿಜವಾಗಿಯೂ ನಡೆಯುವ ಒಂದು ಪಕ್ಷಪಾತವನ್ನು ಈ ಗಾದೆ ಮಾತು ಪರಿಚಯಿಸಿದೆ.  ಮನೆಗಳಲ್ಲಿ ತುಂಬ ಜನ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವವರು ತಮಗೆ ಇಷ್ಟ ಇರುವವರಿಗೆ ಸಾರಿನ ಹೋಳುಗಳು ಜಾಸ್ತಿ ಬರುವಂತೆ ಸಟ್ಟುಗ ಅಥವಾ ಸೌಟನ್ನು ಪಾತ್ರೆಯ ಆಳಕ್ಕೆ ಹೋಗುವಂತೆ ಮುಳುಗಿಸಿ‌ ಬಡಿಸುವುದು, ತಮಗೆ ಇಷ್ಟ ಇಲ್ಲದವರಿಗೆ ಸಟ್ಟುಗವನ್ನು ಮೇಲೆ ಮೇಲೆಯೇ  ತೇಲಿಸಿ ನೀರು ನೀರಾದ ಸಾರನ್ನು ಬಡಿಸುವುದು – ಹೀಗೆ ಮಾಡುತ್ತಾರೆ. ‌ಈ ರೀತಿಯಲ್ಲಿ ತಮ್ಮ ಸಹಜೀವಿಗಳ ನಡುವೆ ಕೆಲವೊಮ್ಮೆ ಬಹಳ ಸೂಕ್ಷ್ಮವಾದ ರೀತಿಯಲ್ಲಿ […]

ಕನ್ನಡ ನಾಡಿನ ಒಂದು ಸರಳ ಪ್ರಾದೇಶಿಕ ಖಾದ್ಯ – ಕಲ್ಲನ್ನ

ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು.‌ ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ‌ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ.  ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ […]

Ionisation gauge

ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು‌. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ‌.

Page 19 of 128

Kannada Sethu. All rights reserved.