Electron paramagnetic resonance(EPR)

ಎಲೆಕ್ಟ್ರಾನು ಅರೆಕಾಂತೀಯ ಅನುರಣನ – ಲೋಹಗಳು ಮತ್ತು ಅರೆವಾಹಕಗಳಲ್ಲಿ ವಾಹಕ ಎಲೆಕ್ಟ್ರಾನುಗಳಿಂದ ಉಂಟಾಗುವ ಅನುರಣನವನ್ನು ಎಲೆಕ್ಟ್ರಾನು ಅರೆಕಾಂತೀಯ ಅನುರಣನ ಎನ್ನುತ್ತಾರೆ.

ಕನ್ನಡ ಗಾದೆಮಾತು – ಜನ ಮರುಳೋ ಜಾತ್ರೆ ಮರುಳೋ.

ಜನರು ಒಂಟಿಯಾಗಿದ್ದಾಗ ಅಥವಾ ತಮ್ಮ ಕುಟುಂಬದವರೊಂದಿಗೆ ಇದ್ದಾಗ ಹೇಗೆ ಇರುತ್ತಾರೋ ಯೋಚಿಸುತ್ತಾರೋ ಅದು  ಅವರವರಿಗೆ ಸಂಬಂಧಿಸಿದ ವಿಷಯ. ‌ಆದರೆ ಜನರು ಜಾತ್ರೆಯಂತೆ ಗುಂಪು ಸೇರಿದಾಗ ಕೆಲವೊಮ್ಮೆ ವಿಚಿತ್ರವಾಗಿ, ವಿಲಕ್ಷಣವಾಗಿ ವರ್ತಿಸುತ್ತಾರೆ. ಗಣಪತಿಯ ವಿಗ್ರಹವು ಹಾಲು ಕುಡಿಯಿತು ಎಂದು ನಂಬುವುದು, ದೇವರ ವಿಗ್ರಹವೊಂದು ಕಣ್ಣು ತೆರೆಯಿತು ಎಂದು ಸುದ್ದಿ ಹಬ್ಬಿಸುವುದು,  ಯಾರೋ ಏನೋ  ಯಾವ ಕಾರಣಕ್ಕೋ ಏನೋ ಒಂದು ಕೆಲಸ ಮಾಡಿದರೆ ಅವರನ್ನು ನೋಡಿ ಕುರಿಗಳಂತೆ ತಾವೂ ಅದನ್ನೇ ಎಲ್ಲರೂ ಮಾಡುವುದು..,.. ಹೀಗೆ.‌ ಇಂಗ್ಲೀಷ್ ನಲ್ಲಿ ಇದನ್ನು ಮಾಸ್ […]

ಹೊಟ್ಟೆಪಾಡು ಚಾಟ್ಸ್ ಅಂಗಡಿಯ ಬುಟ್ಟಿ ಚಾಟ್ – ವೀರೇಶರ ವಿಶೇಷ ಕನ್ನಡ ಪ್ರೇಮ

“ಅಬ್ಬ, ನೋಡಿಲ್ಲಿ! ಒಂದು ಕಾಲಿರೋ ಒಬ್ಬ ವ್ಯಕ್ತಿ ಇಟ್ಟಿರೋ ಚಾಟ್ ಅಂಗಡಿ ಎಷ್ಟು ಹೆಸರು ಮಾಡಿದೆ! ಒಮ್ಮೆ ಹೋಗ್ಬರೋಣ ಮೀರಾ” ಎಂದು ನನ್ನ ಮನೆಯವರು ಅಂದಾಗ ನನ್ನಲ್ಲಿ ಕುತೂಹಲ ಮೂಡಿತು. ಯೂಟ್ಯೂಬ್ ನಲ್ಲಿದ್ದ ದೃಶ್ಯಚಿತ್ರವೊಂದರ ಮೂಲಕ ತಿಳಿದ ವಿಷಯ ಇದು‌. ಹಾಗೆಯೇ, ಮುಂದೊಂದು ವಾರಾಂತ್ಯದಲ್ಲಿ ನಾಗರಬಾವಿ ವರ್ತುಲ ರಸ್ತೆಯಲ್ಲಿದ್ದ ಆ ತಿನಿಸಿನಂಗಡಿಯನ್ನು ಹುಡುಕಿಕೊಂಡು ಹೊರಟೆವು. ಗೂಗಲ್ ಗುರು ದಾರಿ ತೋರಿದ್ದರಿಂದ ವಿಳಾಸ  ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ.‌  ರಸ್ತೆ ಬದಿಯಲ್ಲಿ ಪುಟ್ಟ ಟೆಂಪೋ ಒಂದನ್ನು ಚಾಟ್  ಅಂಗಡಿಯಾಗಿ ಪರಿವರ್ತಿಸಿ, […]

Electron Optics

ಎಲೆಕ್ಟ್ರಾನು ದೃಶ್ಯ-ಬೆಳಕು ವಿಜ್ಞಾನ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳಲ್ಲಿ ಒಂದು ಎಲೆಕ್ಟ್ರಾನು ಕಿರಣಪುಂಜದ ವರ್ತನೆ ಮತ್ತು ನಿಯಂತ್ರಣಗಳ ಅಧ್ಯಯನ.

Electron microscope

ಎಲೆಕ್ಟ್ರಾನು ಸೂಕ್ಷ್ಮದರ್ಶಕ – ಒಂದು ವಸ್ತುವಿನ ಹಿಗ್ಗಿಸಿದ ಬಿಂಬವನ್ನು ಉತ್ಪತ್ತಿ ಮಾಡಲು ಬೆಳಕಿನ ಕಿರಣಗಳ ಬದಲು ವಿದ್ಯುತ್ತೀಯ ಹಾಗೂ ಕಾಂತೀಯ ಕ್ಷೇತ್ರಗಳ ಸಂಯೋಜನೆಯನ್ನು ಬಳಸುವ ಒಂದು ಉಪಕರಣ.

Electron lens

ವಿದ್ಯುನ್ಮಾನ ಮಸೂರ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳ ಒಂದು ಸಂಯೋಜನೆಯನ್ನು ಎಲೆಕ್ಟ್ರಾನು ಪುಂಜವೊಂದನ್ನು ಗಮನಕೇಂದ್ರಕ್ಕೆ ತರಲು ಬಳಸುವುದು.

Electronics

ವಿದ್ಯುನ್ಮಾನ ವಿಜ್ಞಾನ – ವಿದ್ಯುನ್ಮಂಡಲಗಳು ಮತ್ತು ಅವುಗಳ ನಿರ್ಮಾಣಗಳನ್ನು ಅಧ್ಯಯನ ಮಾಡುವ ಒಂದು ವಿಜ್ಞಾನ ಶಾಖೆ.

Electron gun

ಎಲೆಕ್ಟ್ರಾನು ಕೋವಿ – ನಿರ್ವಾತ ಕೊಳವೆಯಲ್ಲಿನ ಕಾಯಿಸಿದ ಋಣ ವಿದ್ಯುದ್ವಾರವನ್ನು ಸೂಚಿಸುವ ಪದ. ಇದು ಉಷ್ಣ ಅಯಾನು ಹೊರಚೆಲ್ಲುವಿಕೆಯ ಮೂಲಕ ಎಲೆಕ್ರ್ಟಾನುಗಳ ಒಂದು ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ.

ಕನ್ನಡ ಗಾದೆಮಾತು – ಮನೆ ಗೆದ್ದು ಮಾರು ಗೆಲ್ಲು.

ಕನ್ನಡ  ವಿವೇಕದ  ಒಂದು ನೆಲೆಯನ್ನು ಬಹು ಅರ್ಥವತ್ತಾಗಿ‌ ಹೇಳುವ  ಗಾದೆ ಮಾತು ಇದು. ಮೊದಲು ಮನುಷ್ಯನು ತನ್ನ ಮನೆಯನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು, ನಂತರವಷ್ಟೇ ಅವನು ಮಾರಿನ ಬಗ್ಗೆ ಅಂದರೆ ಮನೆಯಾಚೆಗಿನ ವಿಸ್ತಾರ ಪ್ರದೇಶದ ಹಿತ, ನೆಮ್ಮದಿಗಳ ಬಗ್ಗೆ ಆಲೋಚಿಸಬೇಕು.‌ ತನ್ನ ಮನೆಯನ್ನು ನಿರ್ಲಕ್ಷಿಸಿ, ನೋಯಿಸಿದವನು ಎಷ್ಟು ಲೋಕೋಪಕಾರ ಮಾಡಿದರೆ ಏನು ಪ್ರಯೋಜನ? ಯೋಚಿಸಿ ನೋಡಬೇಕಾದ ವಿಷಯ ಇದು.‌ Kannada proverb – Mane geddu maaru gellu – ( First win the hearts […]

 “ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

Page 77 of 129

Kannada Sethu. All rights reserved.