ನೀರ್ ದೋಸೆ, ನೀರ್  ಚಟ್ನಿ, ನೀರ್ ಪಲ್ಯ, ನೀರ್ ಗೊಜ್ಜು…. ಅಯ್ಯಯ್ಯೋ….

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು‌ “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ.  ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ […]

Elastance

ವಿದ್ಯುತ್ ಸಾಮರ್ಥ್ಯ ವಿಲೋಮ – ವಿದ್ಯುತ್ ಸಾಮರ್ಥ್ಯದ ವಿಲೋಮ‌‌ ಇದು. ಇದನ್ನು ವಿಲೋಮ ಫ್ಯಾರಡ್ ಗಳಲ್ಲಿ ಅಳೆಯುತ್ತಾರೆ.

Effusion 

ಹೊರ ಹರಿಯುವಿಕೆ – ಒಂದು ಸಣ್ಣ ಕಿಂಡಿಯ ಮೂಲಕ ಅನಿಲವೊಂದರ ಹೊರ ಹರಿಯುವಿಕೆ, ಹೊರ ಚೆಲ್ಲುವಿಕೆ. 

Eddy currents

ಸುಳಿರೂಪೀ ವಿದ್ಯುತ್ಪ್ರವಾಹ- ಕಾಂತಕ್ಷೇತ್ರಗಳು ಬದಲಾಗುತ್ತಿದ್ದಾಗ ವಿದ್ಯುತ್ ವಾಹಕಗಳಲ್ಲಿ ಪ್ರಚೋದನೆಗೊಳ್ಳುವ ವಿದ್ಯುತ್ಪ್ರವಾಹಗಳು. ಇವುಗಳಿಂದಾಗಿ ಆ ವಾಹಕಗಳ ತಾಪಮಾನ ಏರಿ ಉಪಯುಕ್ತ ಶಕ್ತಿಯು ನಷ್ಟವಾಗುತ್ತದೆ.

Eclipse

ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು‌ ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.

Echo

ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ. 

ಕನ್ನಡ ಗಾದೆಮಾತು –  ಅನ್ನ ಇಕ್ಕಿ ಸಾಕು ಅನ್ನಿಸಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸಕ್ಕೆ ಆಗಲ್ಲ.

ಮನುಷ್ಯ ಸ್ವಭಾವ ಹಾಗೂ ಬದುಕಿನ ಬಗ್ಗೆ ಮುಖ್ಯವಾದ ಒಳನೋಟವೊಂದನ್ನು ಕೊಡುವ ಗಾದೆ ಮಾತಿದು. ಹಸಿದ ಮನುಷ್ಯನೊಬ್ಬನಿಗೆ ನೀವು ಊಟ ಬಡಿಸಿದಾಗ ಎರಡಲ್ಲ ನಾಲ್ಕು ತುತ್ತಿಗೆ ‘ ಇನ್ನು ಸಾಕು, ಹೊಟ್ಟೆ ತುಂಬಿತು’ ಎಂದು ಅವನು ಹೇಳುತ್ತಾನೆ ಮತ್ತು ಅವನಿಗೆ ಹೊಟ್ಟೆ ತುಂಬ ಬಡಿಸಿದ ತೃಪ್ತಿ ನಿಮಗೆ ಸಿಗುತ್ತದೆ. ಆದರೆ ಹಣದ ವಿಷಯದಲ್ಲಿ ಹೀಗಾಗುವುದಿಲ್ಲ.‌ ಮನುಷ್ಯನಿಗೆ ಯಾರು ಎಷ್ಟು ಹಣ ಕೊಟ್ಟರೂ ಯಾವತ್ತೂ ಅವನಿಗೆ ಸಾಕು ಅನ್ನಿಸಲ್ಲ, ಇನ್ನೂ ಬೇಕು ಬೇಕು ಅನ್ನಿಸುತ್ತಲೇ ಇರುತ್ತೆ. ಲಂಚ-ರಿಷುವತ್ತು, ಭ್ರಷ್ಟಾಚಾರ, ಕಳ್ಳತನದಂತಹ […]

ಜನಪದ ಗಾಯಕರ ಅದ್ಭುತ ಸಂವಹನ‌ ಶೈಲಿ…ಅದ್ಹೆಂಗಪ್ಪಾ ಅಂದ್ರೆ…

“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ.         ಮಂಟೆಸ್ವಾಮಿ‌ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ‌ ಸಂವಹನ ಕಲೆಯು‌ ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ.‌ ಸ್ವಲ್ಪ ಮಾತು, ಸ್ವಲ್ಪ‌ […]

Earth’s magnetism

ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ‌. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.

Earth’s atmosphere

ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ‌ ಅನೇಕ ಪದರಗಳಿರುತ್ತವೆ.

Page 94 of 140

Kannada Sethu. All rights reserved.