ಪದಗಳ  ಉಚ್ಚಾರಣೆ ಅಂದರೆ ತೊಟ್ಟಿಲಲ್ಲಿ ಮಲಗಿರುವ ಎಳೆಮಗುವಿನ ಕೆನ್ನೆ ಮುಟ್ಟಿದಂತೆ….

ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು‌ ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು.         ‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ […]

D.C. (Direct Current)

ನೇರ ವಿದ್ಯುತ್ ಪ್ರವಾಹ – ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವ ವಿದ್ಯುತ್ ಪ್ರವಾಹ.

Day

ದಿನ – ತನ್ನ ಅಕ್ಷದ ಮೇಲೆ ತಿರುಗುತ್ತಿರುವ ಭೂಮಿಯು ತನ್ನ ಒಂದು ಸುತ್ತು ಪೂರೈಸಲು ತೆಗೆದುಕೊಳ್ಳುವ ‌ಸಮಯ. 

Dating technique

ಕಾಲಗಣನೆಯ ತಂತ್ರವಿಧಾನ – ಕಲ್ಲು ಬಂಡೆಗಳು, ಉತ್ಖನನ(ಅಗೆತ) ಸ್ಥಳದ ವಸ್ತುಗಳು, ಪಳೆಯುಳಿಕೆಗಳೇ ಮುಂತಾವುಗಳ ಕಾಲವನ್ನು ನಿಗದಿ ಮಾಡುವ ಅಥವಾ ಕಂಡು ಹಿಡಿಯುವ ವಿಧಾನಗಳು

Data base

ದತ್ತಾಂಶ ಕಣಜ ಅಥವಾ ಮಾಹಿತಿ‌ ಕಣಜ – ಗಣಕ ಯಂತ್ರದಲ್ಲಿ ಸಂಕೇತ ನೀಡಿ ಸಂಗ್ರಹಿಸಬಹುದಾದ ಮತ್ತು ವಿವಿಧ ಶಿರೋನಾಮೆಗಳಡಿಯಲ್ಲಿ ಪಡೆದುಕೊಳ್ಳಬಹುದಾದ ಮಾಹಿತಿಯ ದೊಡ್ಡ ಸಂಗ್ರಹ.

Damping

ಕ್ಷೀಣಗೊಳ್ಳುವಿಕೆ ಅಥವಾ ಕುಗ್ಗುವಿಕೆ – ತೂಗಾಡುತ್ತಿರುವ ಒಂದು ವ್ಯವಸ್ಥೆಯ ಶಕ್ತಿಯು ಕುಗ್ಗುತ್ತಾ ಬರುವುದರಿಂದ, ಅದರ ತೂಗಾಟ ಅಥವಾ ಆಂದೋಲನಗಳ ಅಲೆಯೆತ್ತರವು ಕಡಿಮೆಯಾಗುತ್ತಾ ‌ಬರುವುದು.‌ 

ಕನ್ನಡ ಗಾದೆಮಾತು – ಉಪ್ಪು ತಿಂದೋರು ನೀರು ಕುಡೀಲೇಬೇಕು. 

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಉಪ್ಪು ತಿಂದ ಮೇಲೆ ಬಾಯಾರಿಕೆ ಆಗುವುದು ಪ್ರಕೃತಿ ಸಹಜ. ಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ದೇಹದ ಜೀವಕೋಶಗಳಲ್ಲಿ ಉಪ್ಪಿನ ಅಂಶ ಅಗತ್ಯಕ್ಕಿಂತ ಹೆಚ್ಚಾದಾಗ ಅವುಗಳಲ್ಲಿ ಸಮತೋಲನ ತಪ್ಪಿ ಅಸುಖವುಂಟಾಗಿ ಅವು ನೀರಿಗಾಗಿ ಹಂಬಲಿಸುತ್ತವೆ. ನೀರು ಜೀವಕೋಶದೊಳಗೆ ಬಂದಾಗ ಉಪ್ಪು ಹೊರ ಹೋಗುತ್ತದೆ ಮತ್ತು ಜೀವಕೋಶವು ತನ್ನ ಸಮತೋಲನ ಸ್ಥಿತಿಗೆ ಮರಳುತ್ತದೆ.  ನಮ್ಮ ಹಿರಿಯರು ಶಾಸ್ತ್ರೀಯವಾಗಿ ಜೀವವಿಜ್ಞಾನವನ್ನು ಓದಿಕೊಂಡಿರದಿದ್ದರೂ ಜೀವನಾನುಭವದಿಂದ ಈ ಸಂಗತಿಯನ್ನು ಗ್ರಹಿಸಿ, ಇದಕ್ಕೆ ಹೋಲುವಂತೆ,  ತಪ್ಪು ಮಾಡಿದವರು‌ ಶಿಕ್ಷೆ […]

ಅಗಲಿದ ಸ್ನೇಹಿತನ‌ ಹೆಸರನ್ನು ತನ್ನ ಕಾವ್ಯನಾಮಕ್ಕೆ ಸೇರಿಸಿಕೊಂಡ ಕನ್ನಡ ಕವಿ

ಸಂತೆಬೆನ್ನೂರು ಫೈಜ್ನಟ್ರಾಜ್  – ವಿವಿಧ ಕನ್ನಡ ಪತ್ರಿಕೆಗಳಲ್ಲಿ ಈ ಹೆಸರು ಓದಿದಾಗ ನನಗೆ ಕುತೂಹಲ ಮೂಡುತ್ತಿತ್ತು.‌ ಇದೆಂತಹ ಹೆಸರು? ಫೈಜ್ ಎಂಬ ಮುಸಲ್ಮಾನ ಹೆಸರು ಮತ್ತು ನಟರಾಜ್ ಎಂಬ ಹಿಂದೂ ಹೆಸರುಗಳು ಒಟ್ಟು ಸೇರಿದ್ದು ಹೇಗೆ? ಇದು ಹಿರಿಯರು ತಮ್ಮ ಮನೆಯ ಮಗುವಿಗೆ ಇಟ್ಟಿರಬಹುದಾದ ಹೆಸರೇ? ಅಥವಾ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ಈ  ರೀತಿಯ ಹೆಸರುಗಳನ್ನೇನಾದರೂ ಇಡುತ್ತಾರೆಯೇ?……ಹೀಗೆ ಕೆಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತಿದ್ದವು.          ಈಚೆಗೆ ಒಂದು ದಿನ ಈ ಪ್ರಶ್ನೆಗೆ […]

ಕನ್ನಡ ಗಾದೆಮಾತು –   ಹಸಿದು ಉಣದಿರಬೇಡ, ಹಸಿಯದೆ ಉಣಬೇಡ.

ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]

ಊಟದ ತಟ್ಟೆಗೆ ಅದೆಷ್ಟು ಹೆಸರುಗಳು!!

ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ.  ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ […]

Page 94 of 129

Kannada Sethu. All rights reserved.