Electric current 

ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹ ಇದು.

Electric charge

ವಿದ್ಯುದಂಶ – ವಸ್ತುವಿನ ಮೂಲಕಣಗಳ ಒಂದು ಮೂಲಭೂತ ಗುಣಲಕ್ಷಣ.

ಚಿಂತೆ ಮಾಡಿದರೆ ಸಂತೆ ಸಾಗೀತೇ?

ಮನುಷ್ಯನ ಮನಸ್ಸು ಯಾವುದಾದರೂ ಚಿಂತೆಗೆ ಬಿತ್ತೆಂದರೆ ಅವನ ಕೈಯಲ್ಲಿ ಯಾವ ಕೆಲಸವೂ ಸಾಗುವುದಿಲ್ಲ. ಸಂತೆಯಲ್ಲಾದರೂ ಅಷ್ಟೇ, ಮನೆಯಲ್ಲಾದರೂ ಅಷ್ಟೇ.  ಈ ಬದುಕು  ಸಹ ಒಂದು ರೀತಿಯಲ್ಲಿ ಸಂತೆ ಇದ್ದಂತೆ. ಜನ ಬರುತ್ತಾರೆ, ಹೋಗುತ್ತಾರೆ, ತಮ್ಮಲ್ಲಿರುವುದನ್ನು ಮಾರುತ್ತಾರೆ, ತಮಗೆ ಬೇಕಾದ್ದನ್ನು ಕೊಳ್ಳುತ್ತಾರೆ. ‌ಇಂತಹ ಗಡಿಬಿಡಿ ಗೌಜಿಯ ವಾತಾವರಣದಲ್ಲಿ ಮನುಷ್ಯನು‌ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ವ್ಯಾಪಾರ ಸಾಗುವುದಿಲ್ಲ. ಹಾಗೆಯೇ ಯಾವ್ಯಾವುದಕ್ಕೋ ಚಿಂತೆ ಮಾಡುತ್ತಾ ಕುಳಿತಿದ್ದರೆ ನಮ್ಮ ಬದುಕಿನ ಬಂಡಿ ಮುಂದೆ ಹೋಗದು. ಹೀಗಾಗಿ ನಾವು ಚಿಂತೆ ಮಾಡುವ […]

ದ ಧ ಗಳ ಗೊಂದಲ…ವಿಸ್ತರಿಸುತ್ತಿರುವ ಅಕ್ಷರ ತಪ್ಪುಗಳ ಗೋಲ ..ಅಯ್ಯೋ…!

ದ ಮತ್ತು ಧ ಕಾರಗಳು‌ ವಿದ್ಯಾರ್ಥಿಗಳಿಗೆ ಮಾಡುವ ಗೊಂದಲ ಅಷ್ಟಿಷ್ಟಲ್ಲ.‌ ವಿದ್ಯಾರ್ಥಿ  ಎಂದು ಬರೆಯಬೇಕಾದಾಗ  ವಿಧ್ಯಾರ್ಥಿ ಎಂದು ಬರೆಯುವುದು, ಧನಲಕ್ಷ್ಮಿ ಎಂದು ಬರೆಯಲು ದನಲಕ್ಷ್ಮಿ ಎಂದು ಬರೆಯುವುದು, ಆದ್ಯತೆ ಎಂದು ಬರೆಯಬೇಕಾದಾಗ ಆಧ್ಯತೆ ಎಂದು ಬರೆಯುವುದು, ಧನ್ಯವಾದ‌ ಎಂದು‌ ಬರೆಯಬೇಕಾದಲ್ಲಿ ದನ್ಯವಾದ ಎಂದು ಬರೆಯುವುದು……,ಹೀಗೆ.‌ ಇದಕ್ಕೆ ಇರುವ ಒಂದೇ ಪರಿಹಾರ ಅಂದರೆ ವಿದ್ಯಾರ್ಥಿಗಳು ಉಚ್ಚಾರಕ್ಕೆ ಗಮನ ಕೊಡುವಂತೆ ಮಾಡಿ ಆ ಪದಗಳ ಅರ್ಥ ವ್ಯತ್ಯಾಸವನ್ನು ಅವರಿಗೆ ತಿಳಿಸಿಕೊಡುವುದು. ಇದು ಶಾಲೆಯಲ್ಲಿ ಅಧ್ಯಾಪಕರು ‌ಮತ್ತು ಮನೆಯಲ್ಲಿ ತಂದೆತಾಯಿಗಳು ಮಾಡಬೇಕಾದ ಕೆಲಸ. […]

Electric bell 

ವಿದ್ಯುತ್ ಗಂಟೆ – ವಿದ್ಯುತ್ ಕಾಂತೀಯ ನೆಲೆಯಿಂದ ಕಾರ್ಯ ನಿರ್ವಹಿಸುವ ಸುತ್ತಿಗೆಯೊಂದು ಗಂಟೆಯನ್ನು ಹೊಡೆಯುವ ವ್ಯವಸ್ಥೆಯುಳ್ಳ ಒಂದು ಉಪಕರಣ.

Electric arc

ವಿದ್ಯುತ್ ಪ್ರಕಾಶ – ಎರಡು ವಿದ್ಯುದ್ವಾರಗಳ ನಡುವೆ ಹೊರಚೆಲ್ಲುವ ಬೆಳಕು.

Electical energy

ವಿದ್ಯುತ್ ಶಕ್ತಿ – ಒಂದು ವಿದ್ಯುತ್ ಕ್ಷೇತ್ರದಲ್ಲಿ ಎಲೆಕ್ಟ್ರಾನಿನ ಸ್ಥಾನಕ್ಕೆ ಸಂಬಂಧಿಸಿದಂತಹ ಒಂದು ಶಕ್ತಿ.

Electret 

ವಿದ್ಯುತೀಕೃತ – ಶಾಶ್ವತವಾಗಿ ವಿದ್ಯುತೀಕೃತಗೊಂಡ ಒಂದು ವಸ್ತು. ಇದರ ಒಂದು ತುದಿಯಲ್ಲಿ ಧನ ವಿದ್ಯುದಂಶ ಹಾಗೂ ಇನ್ನೊಂದು ತುದಿಯಲ್ಲಿ ಋಣ ವಿದ್ಯುದಂಶ ಇರುತ್ತದೆ.

Elasticity

ಸ್ಥಿತಿ ಸ್ಥಾಪಕತ್ವ – ಆಕಾರವನ್ನು ಕೆಡಿಸುವ/ಬದಲಾಯಿಸುವ ಪೀಡನೆಯನ್ನು ತೆಗೆದು ಹಾಕಿದಾಗ ತನ್ನ ಮೂಲ ಆಯಾಮಗಳನ್ನು ಮರಳಿ ಪಡೆಯುವ ಗುಣವೇ ಸ್ಥಿತಿ ಸ್ಥಾಪಕತ್ವ.‌

ಕನ್ನಡ ಗಾದೆಮಾತು –  ಅರ್ಧ ಕಲಿತವನ ಅಬ್ಬರ ಹೆಚ್ಚು.

ನಿಜವಾಗಿಯೂ ಜ್ಞಾನಿಗಳಾದವರು ಅಬ್ಬರ ಮಾಡುವುದಿಲ್ಲ.‌ ‘ತಮಗೆ ಇಷ್ಟು ಗೊತ್ತು, ಅಷ್ಟು ಗೊತ್ತು, ತಾವು ಎಲ್ಲರಿಗಿಂತ ಮೇಲು’ ಎಂದು ಬೀಗುವುದಿಲ್ಲ.‌ ಆದರೆ ಯಾವುದಾದರೊಂದು ವಿಷಯವನ್ನು ಸ್ವಲ್ಪ ಕಲಿತವರು ತಾವು ಬಹಳ ಹೆಚ್ಚು ಕಲಿತುಬಿಟ್ಟಿದ್ದೇವೆ ಎಂದು ಅಬ್ಬರ ಮಾಡುತ್ತಾರೆ, ಮತ್ತು ಹೀಗೆ ಮಾಡಿ ತಮ್ಮ ಸುತ್ತಮುತ್ತಲಿನ ಜನರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಹೀಗಾಗಿ, ಮನುಷ್ಯನು ನಿರಂತರವಾಗಿ ಕಲಿಯುತ್ತಾ ಇರಬೇಕೇ ಹೊರತು ಅನಗತ್ಯ ಕಡೆಗಳಲ್ಲಿ ತನ್ನ ಜ್ಞಾನ ಪ್ರದರ್ಶನ ಮಾಡಿ ತನ್ನ ಸ್ಥಾನವನ್ನು ತಾನೇ ಕಳೆದುಕೊಳ್ಳಬಾರದು‌. Kannada proverb – Ardha kalithavana […]

Page 93 of 140

Kannada Sethu. All rights reserved.