ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ ಹಾಗೆ.

ಕನ್ನಡದ ಬಹು ಸ್ವಾರಸ್ಯಕರ ಗಾದೆಮಾತುಗಳಲ್ಲಿ‌ ಇದಕ್ಕೆ ಮೊದಲ ಸ್ಥಾನ ಕೊಟ್ಟರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಜೀವನದಲ್ಲಿ ನಮ್ಮ ಸಹಜೀವಿಗಳ  ವಿಚಿತ್ರ  ನಡವಳಿಕೆಗಳಿಗೆ ಸಾಕ್ಷಿಯಾಗುತ್ತೇವೆ, ಅಥವಾ ನಾವು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಅವರಿಗೆ ಅನ್ನಿಸುವ ಸಂದರ್ಭಗಳು ಬರಬಹುದು.‌‌‌ ಇದನ್ನು ತುಸು ವಿವರಿಸುತ್ತೇನೆ.‌ ಒಬ್ಬರು ಇನ್ನೊಬ್ಬರಿಗೆ ರಾಮಾಯಣದ ಕಥೆಯನ್ನು ರಾತ್ರಿಯೆಲ್ಲ ವಿಶದವಾಗಿ ಹೇಳಿದರು ಎಂದು ಇಟ್ಟುಕೊಳ್ಳೋಣ. ಕೇಳುವವರು ಎಲ್ಲ ಕೇಳಿಸಿಕೊಂಡ ಮೇಲೆ ‘ಹೌದು, ರಾಮನಿಗೂ ಸೀತೆಗೂ ಏನು ಸಂಬಂಧ ಅಂತ ಸ್ವಲ್ಪ ಹೇಳಿ ಮತ್ತೆ? ‘ ಅಂತ ಕೇಳಿದರೆ ತನ್ಮಯವಾಗಿ […]

ಕನ್ನಡ ಗಾದೆಮಾತು –    ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ.

ಗಾದೆಮಾತುಗಳಲ್ಲಿ ಎಷ್ಟು ಸೂಕ್ಷ್ಮವಾದ ಜೀವನ ಗಮನಿಕೆ ಇರುತ್ತದೆ ಎಂಬುದಕ್ಕೆ ಈ ಗಾದೆಮಾತು ಸಾಕ್ಷಿಯಾಗಿದೆ. ಆನೆಯೊಂದಕ್ಕೆ ಇರುವೆ ತೀರಾ ಚಿಕ್ಕ ಯಕಶ್ಚಿತ್ ಜೀವಿ, ಅದು ಏನು ಮಹಾ ಭಾರ‌ ಹೊರಬಲ್ಲುದು ಅನ್ನಿಸಬಹುದೇನೋ.  ಹಾಗೆಯೇ, ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಜವಾಬ್ದಾರಿ ಅಥವಾ ಕಷ್ಟಗಳು ತುಂಬ ಹೆಚ್ಚು ಹಾಗೂ ಬಹಳ ಗಂಭೀರ ಸ್ವರೂಪದವು ಎಂದು ಭಾವಿಸಿರುತ್ತಾರೆ.‌ ಉದಾಹರಣೆಗೆ ಕಛೇರಿಯ ಮೇಲಧಿಕಾರಿಯೊಬ್ಬ ತನ್ನ ಜವಾಬ್ದಾರಿ, ಕೆಲಸದ ಭಾರಗಳು ಬಹಳ ಹೆಚ್ಚು, ಚಪರಾಸಿ ಅಥವಾ ಜವಾನನೊಬ್ಬನಿಗೆ ಇರುವ ಕೆಲಸ ಕಷ್ಟದ್ದಲ್ಲ ಎಂಬ ಅನಿಸಿಕೆ […]

ಕನ್ನಡ ಗಾದೆಮಾತು – ಕಾಸೂ ಹಾಳು ತಲೇನೂ ಬೋಳು‌.

ಕನ್ನಡದಲ್ಲಿ ದೇಸಿಮಾತುಗಳನ್ನು ಬಲ್ಲವರ ಸಮುದಾಯದಲ್ಲಿ ಸಾಕಷ್ಟು ಬಾರಿ ಬಳಕೆಯಾಗುವ ಗಾದೆಮಾತು ಇದು. ‌ಕ್ಷೌರಿಕನ ಅಂಗಡಿಗೆ ಹೋದಾಗ ಅವನ ಕೆಲಸಕ್ಕೆ ಕೂಲಿ ಕೊಡುವುದಂತೂ ಸರಿಯೇ, ಆದರೆ ನಮ್ಮ ಕೂದಲನ್ನೂ ಅವನ ಅಂಗಡಿಯಲ್ಲಿ ಕಳೆದುಕೊಳ್ಳುತ್ತೇವಲ್ಲ! ಹಾಗೆಯೇ ಜೀವನದಲ್ಲಿ ಕೆಲವು ಸಲ ಎರಡೆರಡು ಕಡೆಯಿಂದ ನಷ್ಟ ಅನುಭವಿಸುವ ಸನ್ನಿವೇಶ ಬಂದಾಗ ಈ ಗಾದೆಮಾತನ್ನು ಹೇಳುತ್ತಾರೆ. ಉದಾಹರಣೆಗೆ, ವಸ್ತುವೊಂದನ್ನು ದುಬಾರಿ ಬೆಲೆಗೆ ಕೊಂಡುಕೊಂಡು, ಮನೆಗೆ ಬಂದು ನೋಡಿದಾಗ ಅದು ಉತ್ತಮ ಗುಣಮಟ್ಟದ್ದಲ್ಲ ಎಂದು ಗೊತ್ತಾದಾಗ, ಹಾಗೆಯೇ ಕೂಲಿ ಕೊಟ್ಟು ಕೆಲಸಕ್ಕೆ ಜನರನ್ನು ನೇಮಿಸಿಕೊಂಡು ಅವರು […]

ಕನ್ನಡ ಗಾದೆಮಾತು – ಮಂಗಳಾರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತ‌. 

ಕನ್ನಡದ ಒಂದು ಜನಪ್ರಿಯ ಗಾದೆ ಮಾತು ಇದು ; ಉತ್ಪ್ರೇಕ್ಷೆಯ ಮೂಲಕ ಜನಗಳ ಸ್ವಭಾವವೊಂದನ್ನು ಕುರಿತು ಒಳನೋಟ ನೀಡುತ್ತದೆ.‌   ಹಿಂದೂ ಧರ್ಮದ  ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ಮೇಲೆ ಮಂಗಳಾರತಿ, ತೀರ್ಥ ಕೊಡುವುದು ಪದ್ಧತಿ ಅಲ್ಲವೇ? ಅಲ್ಲಿ ಮಂಗಳಾರತಿಯ ತಾಪಕ್ಕೆ ಮತ್ತು ತೀರ್ಥದ ತಂಪಿಗೆ ನಾವು ಸಲ್ಲುವುದು ಒಂದೆರಡು ಮೂರು‌ ಕ್ಷಣಗಳ ಕಾಲ‌ ಅಷ್ಟೇ. ಅದರಿಂದಾಗಿ ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ.‌ ಆದರೆ ಕೆಲವು ಅತಿಸೂಕ್ಷ್ಮ ಮನಸ್ಸು ಅಥವಾ ಅತಿಸೂಕ್ಷ್ಮ ಆರೋಗ್ಯ ಪರಿಸ್ಥಿತಿಯವರು,  ಬೇರೆಯವರು […]

ಕನ್ನಡ ಗಾದೆಮಾತು – ನಾಳೆ ಎಂದವನ ಮನೆ ಹಾಳು.

ಸಮಯ ಅನ್ನುವುದು ಪ್ರತಿ‌ ಬೆಳಿಗ್ಗೆ, ಬದುಕಿರುವ ಎಲ್ಲ ಮನುಷ್ಯರಿಗೂ, ಇಪ್ಪತ್ನಾಲ್ಕು ಗಂಟೆಗಳ ಲೆಕ್ಕದಲ್ಲಿ ಸಮಾನವಾಗಿ ಸಿಗುವ ಅತ್ಯಮೂಲ್ಯ ಸಂಪತ್ತು.‌ ಇದನ್ನು‌ ಕೂಡಿಡಲಾಗದು, ಒಮ್ಮೆ ಕಳೆದರೆ ಏನು ಮಾಡಿದರೂ ಮರಳಿ‌ ಪಡೆಯಲಾಗದು. ಇದು ಗೊತ್ತಿದ್ದರೂ ನಾವು ಮನುಷ್ಯರು ನಾವು ಮಾಡಬೇಕಾದ ಮುಖ್ಯ ಕೆಲಸಗಳನ್ನು ‘ನಾಳೆ ಮಾಡಿದರಾಯಿತು ಬಿಡು’ ಎಂದು ಮುಂದಕ್ಕೆ ಹಾಕುತ್ತಲೇ ಇರ್ತೇವೆ. ಆದರೆ ಆ ‘ನಾಳೆ’ ಬರದೆಯೇ ಹೋಗಬಹುದು ಅನ್ನುವುದು ಜೀವನದ ಒಂದು ರುದ್ರ ಸತ್ಯ.  ಸಾಂಸಾರಿಕ ತಾಪತ್ರಯ, ಅನಾರೋಗ್ಯ, ವ್ಯವಹಾರದಲ್ಲಿ ಕಷ್ಟನಷ್ಟ, ಪ್ರಕೃತಿ ವೈಪರೀತ್ಯ, ಕೊನೆಗೆ […]

ಕನ್ನಡ ಗಾದೆಮಾತು   –   ಗುಲಗಂಜಿಗೆ ತನ್ನ ಕಪ್ಪು ಕಾಣಲ್ಲ.

ಕನ್ನಡದ ಒಂದು ಪ್ರಸಿದ್ಧ ಗಾದೆಮಾತು ಇದು. ಗುಲಗಂಜಿ ಬೀಜ ನೋಡಲು ತುಂಬ ಸುಂದರವಾಗಿರುತ್ತದೆ‌. ಅದು ಭಾಗಶಃ ಕೆಂಪು ಮತ್ತು ಭಾಗಶಃ ಕಪ್ಪು ಬಣ್ಣದಲ್ಲಿ ಇರುತ್ತದೆ. ಇಂತಹ ಗುಲಗಂಜಿಗೆ  ತನ್ನ ಕಪ್ಪು ಬಣ್ಣ ಕಾಣುವುದಿಲ್ಲ ಎಂಬ ಮಾತು ಜನಜನಿತವಾಗಿದೆ. ಇದೇ ರೀತಿಯಲ್ಲಿ ಮನುಷ್ಯರಿಗೆ ತಮ್ಮ ದೋಷ ಕಾಣುವುದಿಲ್ಲ. ಸಾಮಾನ್ಯವಾದ ಗಮನಿಕೆಯ ಪ್ರಕಾರ ಹೇಳುವುದಾದರೆ, ಬೇರೆಯವರು ತಮ್ಮ ದೋಷದ ಬಗ್ಗೆ ಹೇಳಿದರೆ ಜನರಿಗೆ ಸಿಟ್ಟು ಬರುತ್ತದೆಯೇ ಹೊರತು ಆ ದೋಷವನ್ನು  ತಿದ್ದಿಕೊಳ್ಳುವ ಮನಸ್ಸು ಬರುವುದಿಲ್ಲ. ಒಟ್ಟಿನಲ್ಲಿ ಲೋಕಾರೂಢಿಯಲ್ಲಿ, ಮನುಷ್ಯರಲ್ಲಿ‌  ಇಂತಹ‌ […]

ಕನ್ನಡ ಗಾದೆಮಾತು –  ತುತ್ತು ಹೆಚ್ಚಾದ್ರೆ ಕುತ್ತು.

 ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯವಾದ ವಿಷಯವು ಈ ಗಾದೆಮಾತಿನಲ್ಲಿದೆ.‌ ನಾವು ತಿನ್ನುವ ತುತ್ತು ತುಸು ಕಡಿಮೆಯಾದರೂ ಪರವಾಗಿಲ್ಲ, ಆದರೆ ಅದು ಹೆಚ್ಚಾಗಬಾರದು‌. ಹೆಚ್ಚಾದರೆ ಅಜೀರ್ಣ, ತೂಕದ ಸಮಸ್ಯೆ, ಜಡತೆ….ಹೀಗೆ ಏನೇನೋ ಸಮಸ್ಯೆಗಳು‌ ಬರುತ್ತವೆ. ಆದ್ದರಿಂದ ನಾವು ತುತ್ತು ಹೆಚ್ಚಾದರೆ ಕುತ್ತು ಅಥವಾ ಅಪಾಯ ಎಂಬ ಗಾದೆಮಾತನ್ನು ಮರೆಯಬಾರದು. ಈ ವಿಷಯಕ್ಕೆ ಬಂದಾಗ, ಎಂಬತ್ತು ಶೇಕಡ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ  ಜಪಾನೀ ಜನರ ಆಹಾರದ ಅಭ್ಯಾಸ ನಮಗೆ  ಮೇಲ್ಪಂಕ್ತಿಯಾಗಬೇಕು. Kannada proverb – Thuththu hechchadre kuththu ( […]

ಕನ್ನಡ ಗಾದೆಮಾತು – ಉಂಡಾತಾ ಕೇಳಿದ್ರೆ ಮುಂಡಾಸು ಮೂವತ್ಮೂರು‌ ಮೊಳ ಎಂದಿದ್ದ.

ನಾವು ಮನುಷ್ಯರು ಕೆಲವೊಮ್ಮೆ ನಮ್ಮನ್ನು ಕೇಳಲಾದ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳದೆ ಅಬದ್ಧ, ಅಸಂಬದ್ಧ ಉತ್ತರಗಳನ್ನು ಕೊಡುತ್ತೇವೆ! ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲೂ, ದೈನಂದಿನ ವ್ಯವಹಾರ- ಮಾತುಕತೆಗಳಲ್ಲೂ ಕೆಲವು ಸಲ ಹೀಗಾಗುತ್ತೆ. ಕೇಳಿದ ಪ್ರಶ್ನೆ ಒಂದು ದಿಕ್ಕಲ್ಲಿದ್ದರೆ, ಉತ್ತರ ಇನ್ಯಾವುದೋ ದಿಕ್ಕಿನಲ್ಲಿದ್ದು, ಹೇಳಿದ್ದಕ್ಕೂ ಕೇಳಿದ್ದಕ್ಕೂ ಸಂಬಂಧವೇ ಇರುವುದಿಲ್ಲ. ಇದನ್ನು ಗಮನಿಸಿಯೇ ನಮ್ಮ ಹಿರಿಯರು ಮೇಲಿನ ಗಾದೆಮಾತನ್ನು ಮಾಡಿರಬೇಕು‌. ‘ಊಟ ಆಯಿತಾ?’ ಎಂದು ಕೇಳಿದರೆ ಆಯಿತು ಅಥವಾ ಇಲ್ಲ ಎಂದು ಉತ್ತರ ಕೊಡುವ ಬದಲು ಪುಣ್ಯಾತ್ಮರೊಬ್ಬರು ‘ಮುಂಡಾಸು( ತಲೆಗೆ ಕಟ್ಟುವ ಬಟ್ಟೆ […]

ಕನ್ನಡ ಗಾದೆಮಾತು    –   ತಲೆ ಮೇಲೆ ಸಾಲ ಹೋಗ್ಬಾರ್ದು, ಒಲೆ ಮೇಲೆ ಬೆಂಕಿ ಹೋಗ್ಬಾರ್ದು. 

ಜೀವನ ವಿವೇಕದ ಮಾತೊಂದನ್ನು ಅಡಿಗೆ ಮನೆಯ ಹೋಲಿಕೆಯೊಂದಿಗೆ ಈ ಗಾದೆಮಾತು ಹೇಳುತ್ತದೆ. ನಾವು ಸಾಲ ಮಾಡುವಾಗ, ಯಾವತ್ತೂ ಸಹ,  ಎಂದಿಗೂ ತೀರಿಸಲಾಗದಷ್ಟು ಪ್ರಮಾಣದಲ್ಲಿ ಸಾಲ ಮಾಡಬಾರದು‌. ಹೀಗೆ ಮಾಡಿದರೆ ನಾವು ಭರಿಸಲಾಗದ ಕಷ್ಟನಷ್ಟಗಳನ್ನು ಅನುಭವಿಸುತ್ತೇವೆ. ಒಲೆಯ ಬೆಂಕಿ ಹೇಗೆ ಒಲೆಯಿಂದ ಮೇಲೆ ಹೋಗಿ ಅಪಾಯವುಂಟು ಮಾಡುವ ಪರಿಸ್ಥಿತಿ ಬರಬಾರದೋ, ಹಾಗೆಯೇ ಸಾಲಸೋಲ ಎನ್ನುವುದು  ಅತಿಯಾಗಬಾರದು. ಸದಾ ಒಂದು ಮಿತಿಯಲ್ಲಿ, ನಾವು ಭರಿಸಲಾಗುವ  ಸ್ಥಿತಿಯಲ್ಲಿ  ಇರಬೇಕು.  Kannada proverb – Thale mele saala hogbardu, ole mele […]

ಕನ್ನಡ ಗಾದೆಮಾತು – ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು.

ನಮ್ಮ ಹಿರಿಯರು ಕಲಿಸಿದ ಜೀವನ ಪಾಠಗಳಲ್ಲಿ ಈ ಗಾದೆಮಾತು ಸಹ ಒಂದು. ಜನರು ತಮಗಿಂತ ಕಡಿಮೆ ಅನುಕೂಲತೆ ಹೊಂದಿರುವವರಿಗೆ ತಾವು ಏನನ್ನಾದರೂ ಕೊಟ್ಟಾಗ, ತಾವು ಕೊಟ್ಟಿದ್ದರ ಬಗ್ಗೆ ಊರಿಗೆಲ್ಲಾ ಟಾಂಟಾಂ ಮಾಡುವ ಅಗತ್ಯವೇನಿರುವುದಿಲ್ಲ. ದಾನ ಮಾಡುವುದನ್ನು ಎಷ್ಟು ಮೌನವಾಗಿ, ಸದ್ದಿಲ್ಲದೆ ಮಾಡಬೇಕು ಎಂಬುದನ್ನು ಮೇಲಿನ ಮಾತು ಬಹಳ ಮಾರ್ಮಿಕವಾಗಿ ಹೇಳುತ್ತದೆ. ನಾವು ಬಲಗೈಯಿಂದ ಕೊಟ್ಟ ದಾನವು ನಮ್ಮದೇ ದೇಹದ ಭಾಗವಾದ ಎಡಗೈಗೂ ತಿಳಿಯದಷ್ಟು ಮೌನದಲ್ಲಿ‌ ನಾವು ದಾನ ನೀಡಬೇಕು. ಕೊಟ್ಟಿದ್ದರ ಬಗ್ಗೆ ಸಿಕ್ಕಿದವರಿಗೆಲ್ಲಾ ಹೇಳಿಕೊಂಡು ತಿರುಗುತ್ತಿದ್ದರೆ, ನಾವು […]

Page 11 of 20

Kannada Sethu. All rights reserved.