ಒಂದು ಉತ್ಪ್ರೇಕ್ಷೆಯನ್ನು ಬಳಸಿ ಲೋಕವ್ಯವಹಾರದ ಸತ್ಯವನ್ನು ಹೇಳುವಂತಹ ಒಂದು ಗಾದೆಮಾತು ಇದು. ಹಣವೆನ್ನುವುದು ಜನರ ಬದುಕಿಗೆ ಅನಿವಾರ್ಯವಾದ ಸಂಗತಿ. ಒಂದು ಬೆಂಕಿಪೊಟ್ಟಣದಿಂದ ಹಿಡಿದು ದೊಡ್ಡಬಂಗಲೆಯ ತನಕ ಯಾವುದನ್ನು ಕೊಳ್ಳಲಾದರೂ ಹಣ ಬೇಕೇ ಬೇಕು. ಹಣ ಇದೆ ಅಂದರೆ ಅದರ ಅರ್ಥ ಇಡೀ ಲೋಕದ ಭೌತಿಕ ಸಂಪತ್ತಿನ ಖಜಾನೆಯ ಬಾಗಿಲು ತೆಗೆಯಿತು ಎಂದೇ ಅರ್ಥ. ಅದಕ್ಕಾಗಿಯೇ ಜನರು ಹಣಕ್ಕಾಗಿ ಬಹುವಾಗಿ ಆಶಿಸುತ್ತಾರೆ, ಮತ್ತು ಹೇಗಾದರೂ ಮಾಡಿ ಅದನ್ನು ತಮ್ಮದಾಗಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಜನ ನೇರಮಾರ್ಗ ಮಾತ್ರವಲ್ಲ, ವಾಮಮಾರ್ಗವನ್ನು ಹಿಡಿದಾದರೂ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!