ಲೋಕಾನುಭವದ ಸಾರರೂಪವೇ ಗಾದೆಮಾತುಗಳು. ಅದಕ್ಕೆ ಮೇಲಿನದೂ ಅಪವಾದ ಅಲ್ಲ. ಜನ ಏನಾದರೂ ಕೆಲಸವನ್ನು ಪ್ರಾರಂಭಿಸುವಾಗ ಬಲು ಉತ್ಸಾಹದಿಂದ ಪ್ರಾರಂಭಿಸುತ್ತಾರೆ, ನೋಡುವವರು ಆಹಾ ಎನ್ನುವಂತೆ. ಪ್ರಾರಂಭದಲ್ಲಿ ಅಗಸನು ಯಕಃಶ್ಚಿತ್ ಗೋಣಿಚೀಲವನ್ನು ಸಹ ಎತ್ತಿ ಎತ್ತಿ ಒಗೆದಂತೆ. ಆದರೆ, ದಿನ ಕಳೆಯುತ್ತಾ ಹೋದಂತೆ ಅವರ ಉತ್ಸಾಹ ಕುಗ್ಗಿ ಕೆಲಸದ ಗುಣಮಟ್ಟವು ಕಡಿಮೆ ಆಗುತ್ತದೆ. ಇಂತಹ ಮಾತಿಗೆ ಅವಕಾಶ ಕೊಡದಂತೆ ನಾವು ಕೆಲಸದ ಗುಣಮಟ್ಟ ಮತ್ತು ನಮ್ಮ ಉತ್ಸಾಹವನ್ನು ಯಾವಾಗಲೂ ಒಂದೇ ಸಮನಾಗಿರುವಂತೆ ಕಾಪಾಡಿಕೊಳ್ಳಬೇಕು. Kannada proverb – Hosadaralli agasa […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!