ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು. ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!