ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು –   ಹಸಿದು ಉಣದಿರಬೇಡ, ಹಸಿಯದೆ ಉಣಬೇಡ.

ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]

ಕನ್ನಡ ಗಾದೆ ಮಾತು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ.

ಉತ್ತಮವಾದ ಜೀವನಕ್ಕೆ ಪೂರ್ವ ಯೋಜನೆ ತುಂಬ ಅಗತ್ಯ. ಶಾಲಾ ಕಾಲೇಜಿನ ಪರೀಕ್ಷೆ, ಹಬ್ಬ, ಮದುವೆ, ಸಮಾರಂಭ, ಕಾರ್ಯಕ್ರಮ ಯಾವುದೇ ಇರಲಿ, ಒಳ್ಳೆಯ ಪೂರ್ವಯೋಜನೆ ಇದ್ದು ಹಂತಹಂತವಾಗಿ ಸಕಾಲಕ್ಕೆ ಕೆಲಸ ಮಾಡಿದರೆ ಅನಗತ್ಯ ಒತ್ತಡವಿಲ್ಲದೆ ಗುರಿ ಸಾಧಿಸಬಹುದು. ಆದರೆ ಯಾವುದೇ ವಿನ್ಯಾಸ, ಪೂರ್ವ ಯೋಜನೆ ಇಲ್ಲದೆ ಗಡಿಬಿಡಿಯಲ್ಲಿ ಏನಾದರೂ ಮಾಡಲು ಹೊರಟರೆ ಬೇಕಾದ್ದೇನೂ ಕೈಗೆ ಸಿಗದೆ, ಬೇಕಾದವರು ಲಭ್ಯವಾಗದೆ ಪರದಾಡುವಂತಾಗುತ್ತದೆ.‌ ಅದಕ್ಕಾಗಿಯೇ ನೋಡಿ ವಿವೇಕಿಗಳು ಹೇಳುವುದು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ ಆಗಬಾರದು ಎಂದು.‌ ಬಾವಿ […]

ಕನ್ನಡ ಗಾದೆಮಾತು – ಬೀದಿ ಮಕ್ಕಳು ಬೆಳೆದೊ, ಕೋಣೆ ಮಕ್ಕಳು ಕೊಳೆತೊ.

ಕನ್ನಡ ನಾಡಿನಲ್ಲಿ, ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಬಳಸುವ ಒಂದು ಗಾದೆಮಾತು ಇದು.‌ ಬೀದಿಯಲ್ಲಿ ಆಟ ಆಡಿಕೊಂಡು, ಜನರ ಜೊತೆ ಮಾತಾಡಿಕೊಂಡು, ತಪ್ಪು ಮಾಡಿದಾಗ ಬೈಸಿಕೊಂಡು, ಒಳ್ಳೆಯದನ್ನು ಮಾಡಿದಾಗ ಮೆಚ್ಚುಗೆ ಪಡೆದು….ಒಟ್ಟಿನಲ್ಲಿ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಅದೇ ಹೊತ್ತಿನಲ್ಲಿ, ಸದಾ ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿ, ಜನರೊಡನೆ ಬೆರೆಯದೆ, ಪ್ರಪಂಚದ ಪರಿಚಯ ಇಲ್ಲದೆ ಹೋಗುವ ಮಕ್ಕಳ ಮನಸ್ಸು ನಿಂತ ನೀರಿನಂತೆ ಕೊಳೆಯುತ್ತದೆ. ಆದುದರಿಂದ ಮಕ್ಕಳನ್ನು ಅವರ ತಾಯ್ತಂದೆಯರು ಮನೆಯಲ್ಲಿ ಕೂಡಿ ಹಾಕದೆ ನಾಲ್ಕು ಜನರೊಡನೆ […]

ಕನ್ನಡ ಗಾದೆಮಾತು – ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ.

ಆಧುನಿಕ ಮನಃಶಾಸ್ತ್ರವು ‘ನಮ್ಮ ಒಂದು ಆಲೋಚನೆಯು ಅದೇ ಬಗೆಯ ಇನ್ನೊಂದು ಆಲೋಚನೆಯನ್ನು ಆಕರ್ಷಿಸುತ್ತದೆ’ ಎಂದು ಸೈದ್ಧಾಂತಿಕವಾಗಿ ಹೇಳಿದ್ದನ್ನು ಪ್ರಸ್ತುತ ಗಾದೆಮಾತು ಆಡುನುಡಿಯಲ್ಲಿ ಹೇಳಿದೆ. ನಾವು ದಿನವಿಡೀ ಏನು ಆಲೋಚನೆ ಮಾಡುತ್ತೇವೋ ನಮ್ಮ‌ ಬದುಕು ಅದೇ ಆಗುತ್ತದೆ. ಹಾಡಿ ಹಾಡಿ ಅಭ್ಯಾಸವಾದಾಗ ಧ್ವನಿಯಲ್ಲಿ ರಾಗವು ಚೆನ್ನಾಗಿ ಹುಟ್ಟುವಂತೆ, ಸದಾ ‘ನನಗೆ ಆ ರೋಗ, ಈ ರೋಗ….ಅಯ್ಯೋ…’ ಎಂದು ಗೋಳಾಡುತ್ತಾ ನರಳುತ್ತಾ ಇರುವವರು ಕೊನೆಗೆ ರೋಗವೇ ತಾವಾಗಿಬಿಡುತ್ತಾರೆ! ಹೀಗಾಗಿ ನಾವು ಏನನ್ನು ಪುನರಾವರ್ತಿತವಾಗಿ ಮಾಡುತ್ತೇವೋ, ಯಾವುದರ ಕುರಿತು ಸದಾ ಮಾತಾಡುತ್ತೇವೋ […]

ಕನ್ನಡ ಗಾದೆ ಮಾತು – ಅಟ್ಟ ಮೇಲೆ ಒಲೆ ಉರೀತು, ಕೆಟ್ಟ ಮೇಲೆ ಬುದ್ಧಿ ಬಂತು.‌

ಅಡಿಗೆ ಮಾಡಬೇಕು ಅನ್ನುವಾಗ ಒಲೆ ಉರಿದರೆ ಪ್ರಯೋಜನವೇ ಹೊರತು, ಅಡಿಗೆ ಆದ ಮೇಲೆ ಒಲೆ ಉರಿದರೆ ಪ್ರಯೋಜನವಿಲ್ಲ. ಹಾಗೆಯೇ ಬದುಕು ‌ಹಾಳಾದ ಮೇಲೆ ಬುದ್ಧಿ ಸರಿಯಾದರೆ ಅದರಿಂದ ಪ್ರಯೋಜನ ಇಲ್ಲ.  ಆದುದರಿಂದ, ನಾವು ಸಕಾಲದಲ್ಲಿ‌ ಸರಿಯಾದ ಬುದ್ಧಿಯಿಂದ ಆಲೋಚಿಸಿ, ಅಥವಾ ಬಲ್ಲವರಿಂದ ಮಾರ್ಗದರ್ಶನ ಪಡೆದು ನಮ್ಮ ಬಾಳನ್ನು ಸರಿಮಾಡಿಕೊಳ್ಳಬೇಕು. ಮನಸ್ಸಿಗೆ ತಕ್ಷಣ ನಾಟುವ ಹೋಲಿಕೆಯೊಂದಿಗೆ ಈ‌ ಗಾದೆ ಮಾತು ಒಂದು ಜೀವನ ಪಾಠವನ್ನು ಹೇಳಿದೆ.  Kannada proverb – Atta mele ole uriyithu, ketta mele […]

ಕನ್ನಡ ಗಾದೆ ಮಾತು – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

ಕನ್ನಡ ಭಾಷೆಯಲ್ಲಿರುವ ತುಂಬ ಪರಿಣಾಮಕಾರಿಯಾದ ಗಾದೆಮಾತುಗಳಲ್ಲಿ ಇದೂ ಒಂದು.‌ ಜಿಪುಣ ಬುದ್ಧಿಯ ಜನರ ವರ್ತನೆಯನ್ನು ಮೃದುವಾಗಿ ಟೀಕಿಸಲು ಈ ಗಾದೆಮಾತನ್ನು ಬಳಸುತ್ತಾರೆ. ಮನೆಯಲ್ಲಿ ನೆಂಟರು ಬಂದಾಗ ಅವರಿಗಾಗಿ ಅಡುಗೆ ಮಾಡಿ, ಊಟ ಹಾಕುವ ಸಂದರ್ಭದಲ್ಲಿ ಅಕ್ಕಿಯು ಖರ್ಚಾಗುವುದು ಸಹಜ. ಆದರೆ ತಮ್ಮ ವಸ್ತು ಖರ್ಚಾಗಬಾರದೆಂಬ ಲೋಭಿ ಮನಸ್ಸಿನ ಜನರು ತಮಗೆ ನೆಂಟರ ಮೇಲೆ ಪ್ರೀತಿ ಇದ್ದರೂ ‘ಅಯ್ಯೋ, ಇವರಿಗೆ ಊಟ ಹಾಕಿದರೆ ನಮ್ಮ ಮನೆಯ ಅಕ್ಕಿ ಖರ್ಚಾಗುತ್ತದಲ್ಲಾ…’ ಎಂದು ಮನಸ್ಸಿನಲ್ಲಿಯೇ ಹಳಹಳಿಸುತ್ತಾ, ಅಡುಗೆ ಮಾಡಲು ಹಿಂದೆ ಮುಂದೆ […]

ಕನ್ನಡ ಗಾದೆಮಾತು – ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.

ಚಿಕ್ಕವಯಸ್ಸಿನಲ್ಲಿ ನಾವು ಕಲಿತ ಶಾಲಾಪಾಠ ಅಥವಾ ಬದುಕಿನ ಪಾಠ ನಾವು ಮುದುಕರಾದರೂ ನಮ್ಮೊಂದಿಗೆ ಇರುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳ ತಂದೆತಾಯಿಗಳು, ಶಿಕ್ಷಕರು ಅವರಿಗೆ ತಾವು ಏನು ಕಲಿಸುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ‌ಚಿಕ್ಕವಯಸ್ಸಲ್ಲಿ ನಾವು ಕಲಿತ ಮಗ್ಗಿ, ಪದ್ಯಗಳು, ಕೇಳಿದ ಕಥೆಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತವೆಯಲ್ಲವೇ? ಅದನ್ನೇ ಈ ಗಾದೆಮಾತು ತುಂಬ ಪ್ರಾಸಬದ್ಧವಾಗಿ ಹೇಳಿದೆ.  Kannada proverb – Muuru varshada budhdhi nooru varahada thanaka( What is learnt at three stays […]

ಕನ್ನಡ ನಾಣ್ಣುಡಿ  – ಪರಸೊತ್ತು ಪಾಷಾಣ.

ನಾವು ಚಿಕ್ಕಮಕ್ಕಳಿದ್ದಾಗಿನಿಂದ ಕೇಳಿ ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿರುವ ಮಾತು ಇದು. ಇದರ ಅರ್ಥವೇನೆಂದರೆ, ಬೇರೆಯವರ ಆಸ್ತಿ ಅಥವಾ ಹಣವು ನಮ್ಮ ಮಟ್ಟಿಗೆ ವಿಷ ಇದ್ದ ಹಾಗೆ.‌ ಅದನ್ನು ನಾವು ಮುಟ್ಟಬಾರದು. ಹಣದ ವಿಷಯದಲ್ಲಿ‌ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಬುದ್ಧಿಮಾತು ಇರಲು ಸಾಧ್ಯವೇ? ಲಂಚಕೋರರು, ಮೋಸಗಾರರು ಅವಶ್ಯವಾಗಿ ಅರಿಯಬೇಕಾದ ಮಾತೆಂದರೆ ಇದೇ. Kannada saying – Parasoththu Pashaana( Other’s asset or money is poison to us).  This good old saying in Kannada […]

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.

ಇದು ಕನ್ನಡದಲ್ಲಿ ಬಹುವಾಗಿ ಬಳಸಲಾಗುವ ಒಂದು ಗಾದೆ ಮಾತು. ಮೊಸರಲ್ಲಿ ಕಲ್ಲು ಬರುವುದು ಸಾಧ್ಯವೇ ಇಲ್ಲ, ಆದರೆ ಗಂಡನಿಗೆ ಹೆಂಡತಿಯ ಮೇಲೆ ಅಸಮಾಧಾನ, ಸಿಟ್ಟು ಇದ್ದರೆ ಅವನ ಕಣ್ಣಿಗೆ ಅವಳಲ್ಲಿ ತಪ್ಪುಗಳೇ ಕಾಣುತ್ತವೆ. ಅವಳು ಬಡಿಸಿದ ಮೊಸರಿನಲ್ಲಿ ಕಲ್ಲು ಇಲ್ಲದಿದ್ದರೂ ಅದು ಸಿಗುತ್ತದೆ!! ಮತ್ತು ಇನ್ನೊಂದು ಹೊಸ ಜಗಳಕ್ಕೆ ಕಾರಣವಾಗುತ್ತದೆ. ಹೀಗೆಯೇ ತಮಗೆ ಮನಸ್ಸಿಲ್ಲ ಎಂದಾದರೆ ಮನುಷ್ಯರು ಏನೋ ಒಂದು ಕುಂಟುನೆಪ ಹೇಳಿ, ಅಥವಾ ಇಲ್ಲದಿರುವ ದೋಷವೊಂದನ್ನು ಹುಡುಕಿ ಆಡಿ ಸಂಬಂಧದಿಂದ ದೂರವಾಗುತ್ತಾರೆ ಅಥವಾ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆ. […]

ಹೌದಪ್ಪನ ಚಾವಡೀಲಿ ಹೌದಪ್ಪ, ಅಲ್ಲಪ್ಪನ ಚಾವಡೀಲಿ ಅಲ್ಲಪ್ಪ.

ಕೆಲವು ಜನರಿರುತ್ತಾರೆ, ಅವರಿಗೆ ಸ್ವಂತ ಅಭಿಪ್ರಾಯ, ಅನಿಸಿಕೆ ಅನ್ನುವುದೇ ಇರುವುದಿಲ್ಲ. ಯಾರು ಏನು ಹೇಳಿದರೂ ಹೌದು, ಹೌದು ಅನ್ನುತ್ತಾರೆ. ತುಸು ಮುಂಚೆ ತಾವು ಹೌದು ಎಂದು ಒಪ್ಪಿಕೊಂಡಿದ್ದ ವಿಷಯವನ್ನು ಎರಡು ಗಳಿಗೆಯ ನಂತರ ಇನ್ನೊಬ್ಬರು ಅಲ್ಲ ಅಂದೊಡನೆ ಇವರೂ ಸಹ ಅಲ್ಲ ಅನ್ನುತ್ತಾರೆ! ಇಂಥವರು ಬೌದ್ಧಿಕವಾಗಿ ಚಿಂತನ-ಮಂಥನ ನಡೆಸುವ ವಿಷಯದಲ್ಲಿ ಸೋಮಾರಿತನದಿಂದ ಹೀಗೆ ಮಾಡುವರೋ, ಅಥವಾ ಎದುರಿಗೆ ಇರುವವರನ್ನು ಮೆಚ್ಚಿಸಿ ಅವರಿಂದ ತಮಗೆ ಬೇಕಾದ ಸ್ವಾರ್ಥಸಾಧನೆ ಮಾಡಿಕೊಳ್ಳಲು ಹೀಗೆ ವರ್ತಿಸುವರೋ ಹೇಳಲಾಗದು. ಆದರೆ ಇಂಥವರನ್ನು ಯಾರೂ ಸಹ […]

Page 15 of 19

Kannada Sethu. All rights reserved.