ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನವಲ್ಲ

ಜೀವನದಲ್ಲಿ ಕೆಲವು ಸಂಗತಿಗಳು ತಮ್ಮ ಹೊರ ರೂಪ, ಥಳುಕು, ಮಿಂಚಾಟದಿಂದ ತುಂಬ ಆಕರ್ಷಕವಾಗಿ, ತುಂಬ ಮೌಲ್ಯಯುತವಾದವೇನೋ ಎಂಬಂತೆ ಕಾಣುತ್ತವೆ. ಬೇಗಡೆ ಕಾಗದ ನಿಜವಾದ ಚಿನ್ನದಂತೆ ಕಾಣಬಹುದು, ಬಿಳಿಯಾದ ಯಾವುದೋ ದ್ರವ ಹಾಲಿನಂತೆ ಕಾಣಬಹುದು. ಆದುದರಿಂದ ನಾವು ಜೀವನದಲ್ಲಿ ಮೇಲ್ನೋಟಕ್ಕೆ ಆಕರ್ಷಕವಾಗಿ‌ ಕಾಣುವ ಸಂಗತಿಗಳನ್ನು ಮತ್ತೆ ಮತ್ತೆ ಪರಿಶೀಲಿಸಿಯೇ ನಂಬಬೇಕು. Kannada proverb – Bellagirodella haalalla, holeyodella chinnavalla( All that looks white is not milk, and all that glitters is not […]

ಕನ್ನಡ ಗಾದೆ ಮಾತು – ತಾಳಿದವನು ಬಾಳಿಯಾನು.

ತಾಳ್ಮೆ ಎಂಬ ಸದ್ಗುಣದ ಮಹತ್ವವನ್ನು ಹೇಳುವ ಮಾತು ಇದು. ಮೋಡ ಕರಗಿ ಹನಿಯೊಡೆಯಲು, ಬೀಜ ಸಸಿಯಾಗಲು, ಕಾಯಿ ಹಣ್ಣಾಗಲು ಅದರದ್ದೇ ಆದ ಸಮಯ ಬೇಕು‌. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ. ಹೀಗೆಯೇ ಒಬ್ಬರನ್ನು ತಪ್ಪು ತಿಳಿಯುವ ಮೊದಲು, ಯಾರ ಮೇಲಾದರೂ ಕೋಪಿಸಿಕೊಳ್ಳುವ ಮೊದಲು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ಮಾಡಬೇಕು. ಇಂತಹ ತಾಳ್ಮೆಯ ಗುಣ ಯಾರಿಗೆ ಇರುತ್ತದೋ ಅವರು ಚೆನ್ನಾಗಿ ಬಾಳುವುದರಲ್ಲಿ ಅನುಮಾನವಿಲ್ಲ. Kannada proverb : Taalidavanu baaliyanu( One who has patience […]

ಕನ್ನಡ ಗಾದೆಮಾತು – ರಾತ್ರಿ ಕಂಡ ಬಾವಿಗೆ ಹಗಲು ಬಿದ್ರಂತೆ. 

ಜೀವನದಲ್ಲಿ ಕೆಲವು ಸಲ ಜನರು ಗೊತ್ತಿದ್ದೂ ಗೊತ್ತಿದ್ದೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.‌ ತಮ್ಮ ಅಳತೆ ಮೀರಿ ಸಾಲ ಮಾಡುವುದು, ಮೋಸಗಾರರು ಎಂದು ಒಳ ಮನಸ್ಸಿಗೆ ಗೊತ್ತಿದ್ದರೂ ಅಂತಹವರನ್ನು ನಂಬುವುದು, ಈ ಸಮಕಾಲೀನ ಸಂದರ್ಭದಲ್ಲಿ ಕ್ಷಣಿಕ ವ್ಯಾಮೋಹಕ್ಕೆ, ಅತಿಯಾಸೆಗೆ ಒಳಗಾಗಿ  ಅಂತರ್ಜಾಲ ಅಪರಾಧಗಳಿಗೆ( ಸೈಬರ್ ಕ್ರೈಮ್) ಬಲಿಪಶುವಾಗುವುದು.‌…ಇಂಥವು.‌ ಹೀಗೆ, ಜನ ಹಳ್ಳ ಇದೆಯೆಂದು ಗೊತ್ತಿದ್ದರೂ ಹೋಗಿ ಅದರಲ್ಲಿ ತಾವಾಗಿ ಬಿದ್ದರೆ  ‘ಅಯ್ಯೋ ನೋಡಿ, ರಾತ್ರಿ ಕಂಡ ಬಾವಿಗೆ ಹಗಲು‌ ಬಿದ್ರಂತೆ’ ಎಂದು ಅವರ ಜೊತೆಗಾರರು, ಪರಿಚಿತರು ಉದ್ಗರಿಸುವುದು ವಾಡಿಕೆ.  Kannada […]

ಕನ್ನಡ ನಾಣ್ಣುಡಿ – ಮಾಡಿದ್ದುಣ್ಣೋ ಮಹಾರಾಯ.

ಕನ್ನಡದ ಒಂದು ಪ್ರಸಿದ್ಧ ನಾಣ್ಣುಡಿ ಇದು.‌ ನಾವು‌ ನಮಗಾಗಿ ಮಾಡಿಕೊಂಡ ಅಡಿಗೆಯನ್ನು ನಾವೇ ಉಣ್ಣಬೇಕು.‌ ಹಾಗೆಯೇ ನಮ್ಮ ಕೆಲಸದಲ್ಲಿನ‌ ಸರಿತಪ್ಪುಗಳ ಫಲವನ್ನು ನಾವೇ ಅನುಭವಿಸಬೇಕು.‌ ಈ‌ ನುಡಿಯನ್ನು ನೆನೆದು  ಬದುಕಿನಲ್ಲಿ  ನಾವು ಎಚ್ಚರಿಕೆಯಿಂದ ನಮ್ಮ ಹೆಜ್ಜೆಗಳನ್ನು ಇಡಬೇಕು.‌  Kannada saying – Madiddunno maharaya( Eat what you cooked sir!). This is a very popular saying in Kannada. We have to eat what we cooked. Just like this […]

ಕನ್ನಡ ಗಾದೆಮಾತು –  ಹೊಟ್ಟೆ ತುಂಬಿದ್ರೆ ಹೋಳಿಗೆ ಸಪ್ಸಪ್ಪೆ.‌

ನಮಗೆ ಒಂದು ವಸ್ತು ಅಥವಾ ಒಂದು ವಿಷಯದ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೆ ಅಥವಾ ಅದರ ಅಗತ್ಯ ನಮಗಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ನಮ್ಮ‌ ಮನಸ್ಸಿನಲ್ಲಿ ಆ ವಸ್ತುವಿನ ಮೌಲ್ಯ‌ ಕಡಿಮೆ ಆಗುತ್ತದೆ! ಹೊಟ್ಟೆ ತುಂಬ ಊಟ ಮಾಡಿದ್ದು, ‘ಇನ್ನು ಒಂದು ತುತ್ತು ಸಹ ಬೇಡ’ ಅನ್ನಿಸುವವರಿಗೆ ಎಷ್ಟೇ ಸಿಹಿಯಾದ ಹೋಳಿಗೆ ಕೊಟ್ಟರೂ ‘ ಅಯ್ಯೋ, ನಂಗೆ ಬೇಡ. ಇದು‌ ಸಪ್ಪೆ ಸಪ್ಪೆ’ ಎಂದಾರು ಅವರು! ನಮ್ಮಮ‌ನಸ್ಸು ಜೀವನವನ್ನು ನಾವು ನೋಡುವ ಕ್ರಮವನ್ನು ಎಷ್ಟು ಪ್ರಬಲವಾಗಿ ಪ್ರಭಾವಿಸುತ್ತದೆ […]

ಕನ್ನಡ ಗಾದೆ ಮಾತು – ಮುತ್ತು ಕಳೆದರೆ ಸಿಕ್ಬಹುದು, ಹೊತ್ತು ಕಳೆದರೆ ಸಿಕ್ತದಾ? 

ಸಮಯದ ಮಹತ್ವವನ್ನು ತುಂಬ ಪರಿಣಾಮಕಾರಿಯಾಗಿ ಹೇಳುವ ಗಾದೆ ಮಾತಿದು.‌ ಮುತ್ತು‌ ಬೆಲೆಬಾಳುವ ವಸ್ತು ನಿಜ.‌ ಅದು ಒಂದು ವೇಳೆ ಕಳೆದುಹೋದರೆ, ಕಳಕೊಂಡವರ  ಅದೃಷ್ಟ ಚೆನ್ನಾಗಿದ್ದರೆ  ಆ ಮುತ್ತು ಮರಳಿ ಸಿಗುವ ಸಾಧ್ಯತೆ ಇದೆ.‌ ಆದರೆ ವ್ಯರ್ಥವಾಗಿ ಕಳೆದ ಸಮಯ ಮಾತ್ರ ಏನು‌ ಮಾಡಿದರೂ ಮತ್ತೆ ಸಿಗುವುದಿಲ್ಲ.‌ ಅದು ಶಾಶ್ವತವಾಗಿ ಹೊರಟು ಹೋದಂತೆಯೇ ಸರಿ.‌ ಅದಕ್ಕಾಗಿಯೇ ನಾವು ಹೊತ್ತನ್ನು ಮುತ್ತಿಗಿಂತ ಹೆಚ್ಚು ಮೌಲ್ಯಯುತವಾದುದು ಎಂದು ಅರಿತು ಜೋಪಾನ ಮಾಡಬೇಕು.   Kannada proverb – Muththu kaledare sikbahudu, hoththu […]

ಕನ್ನಡ ಗಾದೆಮಾತು – ಗಾಣಗಿತ್ತಿ ಅಯ್ಯೋ ಅಂದ್ರೆ ನೆತ್ತಿ ತಣ್ಣಗಾಗುತ್ತಾ?

ಕನ್ನಡಿಗರು ತಮ್ಮ  ಮಾತಿನಲ್ಲಿ ಆಗಾಗ ಬಳಸುವ ಒಂದು ಗಾದೆ ಮಾತು ಇದು. ಗಾಣ ಅಂದರೆ ಎಣ್ಣೆ ತೆಗೆಯುವ ಯಂತ್ರ, ಆದರಲ್ಲಿ ಕೆಲಸ ಮಾಡಿ ಎಣ್ಣೆ ತೆಗೆಯುವವಳು ಗಾಣಗಿತ್ತಿ. ಎಂದಾದರೂ ಮೈಯಲ್ಲಿ ಉಷ್ಣ ಹೆಚ್ಚಾಗಿ    ತಲೆಯೇನಾದರೂ ಬಿಸಿಯಾಗಿ ‘ಯಾರಾದರೂ ನೆತ್ತಿಗೆ ಒಂದು  ತೊಟ್ಟು ಎಣ್ಣೆ ತಿಕ್ಕಿದರೆ  ಚೆನ್ನ ಅಲ್ಲವೇ’ ಅನ್ನಿಸುತ್ತಿದ್ದಾಗ ನಾವು ಗಾಣಗಿತ್ತಿಯನ್ನು ಭೇಟಿಯಾದೆವು  ಎಂದಿಟ್ಟುಕೊಳ್ಳೋಣ. ಆಗ ಆಕೆ ತನ್ನ ಬಳಿ ಇರುವ ಎಣ್ಣೆಯಲ್ಲಿ ಒಂದು ಹನಿಯನ್ನೂ ಕೊಡದೆ ಬಾಯಲ್ಲಿ ಮಾತ್ರ “ಅಯ್ಯೋ ಪಾಪ, ನಿಮಗೆ ಉಷ್ಣ […]

ಕನ್ನಡ ಗಾದೆಮಾತು – ಉಪ್ಪು ತಿಂದೋರು ನೀರು ಕುಡೀಲೇಬೇಕು. 

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಉಪ್ಪು ತಿಂದ ಮೇಲೆ ಬಾಯಾರಿಕೆ ಆಗುವುದು ಪ್ರಕೃತಿ ಸಹಜ. ಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ದೇಹದ ಜೀವಕೋಶಗಳಲ್ಲಿ ಉಪ್ಪಿನ ಅಂಶ ಅಗತ್ಯಕ್ಕಿಂತ ಹೆಚ್ಚಾದಾಗ ಅವುಗಳಲ್ಲಿ ಸಮತೋಲನ ತಪ್ಪಿ ಅಸುಖವುಂಟಾಗಿ ಅವು ನೀರಿಗಾಗಿ ಹಂಬಲಿಸುತ್ತವೆ. ನೀರು ಜೀವಕೋಶದೊಳಗೆ ಬಂದಾಗ ಉಪ್ಪು ಹೊರ ಹೋಗುತ್ತದೆ ಮತ್ತು ಜೀವಕೋಶವು ತನ್ನ ಸಮತೋಲನ ಸ್ಥಿತಿಗೆ ಮರಳುತ್ತದೆ.  ನಮ್ಮ ಹಿರಿಯರು ಶಾಸ್ತ್ರೀಯವಾಗಿ ಜೀವವಿಜ್ಞಾನವನ್ನು ಓದಿಕೊಂಡಿರದಿದ್ದರೂ ಜೀವನಾನುಭವದಿಂದ ಈ ಸಂಗತಿಯನ್ನು ಗ್ರಹಿಸಿ, ಇದಕ್ಕೆ ಹೋಲುವಂತೆ,  ತಪ್ಪು ಮಾಡಿದವರು‌ ಶಿಕ್ಷೆ […]

ಕನ್ನಡ ಗಾದೆಮಾತು –   ಹಸಿದು ಉಣದಿರಬೇಡ, ಹಸಿಯದೆ ಉಣಬೇಡ.

ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]

ಕನ್ನಡ ಗಾದೆ ಮಾತು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರಂತೆ.

ಉತ್ತಮವಾದ ಜೀವನಕ್ಕೆ ಪೂರ್ವ ಯೋಜನೆ ತುಂಬ ಅಗತ್ಯ. ಶಾಲಾ ಕಾಲೇಜಿನ ಪರೀಕ್ಷೆ, ಹಬ್ಬ, ಮದುವೆ, ಸಮಾರಂಭ, ಕಾರ್ಯಕ್ರಮ ಯಾವುದೇ ಇರಲಿ, ಒಳ್ಳೆಯ ಪೂರ್ವಯೋಜನೆ ಇದ್ದು ಹಂತಹಂತವಾಗಿ ಸಕಾಲಕ್ಕೆ ಕೆಲಸ ಮಾಡಿದರೆ ಅನಗತ್ಯ ಒತ್ತಡವಿಲ್ಲದೆ ಗುರಿ ಸಾಧಿಸಬಹುದು. ಆದರೆ ಯಾವುದೇ ವಿನ್ಯಾಸ, ಪೂರ್ವ ಯೋಜನೆ ಇಲ್ಲದೆ ಗಡಿಬಿಡಿಯಲ್ಲಿ ಏನಾದರೂ ಮಾಡಲು ಹೊರಟರೆ ಬೇಕಾದ್ದೇನೂ ಕೈಗೆ ಸಿಗದೆ, ಬೇಕಾದವರು ಲಭ್ಯವಾಗದೆ ಪರದಾಡುವಂತಾಗುತ್ತದೆ.‌ ಅದಕ್ಕಾಗಿಯೇ ನೋಡಿ ವಿವೇಕಿಗಳು ಹೇಳುವುದು – ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ ಆಗಬಾರದು ಎಂದು.‌ ಬಾವಿ […]

Page 15 of 20

Kannada Sethu. All rights reserved.