ತಮಾಷೆಯಾಗಿ ಕೇಳಿಸುವುದಾದರೂ ತುಂಬ ಅರ್ಥಗರ್ಭಿತವಾದ ಗಾದೆ ಮಾತಿದು. ಅತ್ತೆಗೆ ಮೀಸೆ ಬರುವುದೂ ಇಲ್ಲ, ಅವರನ್ನು ಚಿಕ್ಕಪ್ಪ ಅಂತ ಕರೆಯಲಾಗುವುದೂ ಇಲ್ಲ. ಯಾರಾದರೂ ಆಗದ ಹೋಗದ ಕೆಲಸಗಳ ಬಗ್ಗೆ ಮಾತಾಡಿದರೆ ಅಥವಾ ಪಾಲಿಸಲು ಸಾಧ್ಯವಾಗದ ವಾಗ್ದಾನಗಳನ್ನು ಕೊಟ್ಟರೆ ಈ ಗಾದೆ ಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ನೂರು ರೂಪಾಯಿ ಕೂಡ ಸಂಪಾದಿಸಲಾಗದವನು ತಾನು ಒಂದು ಲಕ್ಷ ರೂಪಾಯಿ ಉಡುಗೊರೆ ಕೊಡುವ ಮಾತಾಡಿದಾಗ ಅಥವಾ ಒಂದು ಹಾಡೂ ಬರದೆ ಇದ್ದವನು ಸಂಗೀತ ಕಛೇರಿ ಮಾಡುತ್ತೇನೆ ಎಂದಾಗ ಜನರು ಮೇಲಿನ ಗಾದೆ ಮಾತನ್ನು […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!