ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಬೀದಿ ಮಕ್ಕಳು ಬೆಳೆದೊ, ಕೋಣೆ ಮಕ್ಕಳು ಕೊಳೆತೊ.

ಕನ್ನಡ ನಾಡಿನಲ್ಲಿ, ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಬಳಸುವ ಒಂದು ಗಾದೆಮಾತು ಇದು.‌ ಬೀದಿಯಲ್ಲಿ ಆಟ ಆಡಿಕೊಂಡು, ಜನರ ಜೊತೆ ಮಾತಾಡಿಕೊಂಡು, ತಪ್ಪು ಮಾಡಿದಾಗ ಬೈಸಿಕೊಂಡು, ಒಳ್ಳೆಯದನ್ನು ಮಾಡಿದಾಗ ಮೆಚ್ಚುಗೆ ಪಡೆದು….ಒಟ್ಟಿನಲ್ಲಿ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಅದೇ ಹೊತ್ತಿನಲ್ಲಿ, ಸದಾ ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿ, ಜನರೊಡನೆ ಬೆರೆಯದೆ, ಪ್ರಪಂಚದ ಪರಿಚಯ ಇಲ್ಲದೆ ಹೋಗುವ ಮಕ್ಕಳ ಮನಸ್ಸು ನಿಂತ ನೀರಿನಂತೆ ಕೊಳೆಯುತ್ತದೆ. ಆದುದರಿಂದ ಮಕ್ಕಳನ್ನು ಅವರ ತಾಯ್ತಂದೆಯರು ಮನೆಯಲ್ಲಿ ಕೂಡಿ ಹಾಕದೆ ನಾಲ್ಕು ಜನರೊಡನೆ […]

ಕನ್ನಡ ಗಾದೆಮಾತು – ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ.

ಆಧುನಿಕ ಮನಃಶಾಸ್ತ್ರವು ‘ನಮ್ಮ ಒಂದು ಆಲೋಚನೆಯು ಅದೇ ಬಗೆಯ ಇನ್ನೊಂದು ಆಲೋಚನೆಯನ್ನು ಆಕರ್ಷಿಸುತ್ತದೆ’ ಎಂದು ಸೈದ್ಧಾಂತಿಕವಾಗಿ ಹೇಳಿದ್ದನ್ನು ಪ್ರಸ್ತುತ ಗಾದೆಮಾತು ಆಡುನುಡಿಯಲ್ಲಿ ಹೇಳಿದೆ. ನಾವು ದಿನವಿಡೀ ಏನು ಆಲೋಚನೆ ಮಾಡುತ್ತೇವೋ ನಮ್ಮ‌ ಬದುಕು ಅದೇ ಆಗುತ್ತದೆ. ಹಾಡಿ ಹಾಡಿ ಅಭ್ಯಾಸವಾದಾಗ ಧ್ವನಿಯಲ್ಲಿ ರಾಗವು ಚೆನ್ನಾಗಿ ಹುಟ್ಟುವಂತೆ, ಸದಾ ‘ನನಗೆ ಆ ರೋಗ, ಈ ರೋಗ….ಅಯ್ಯೋ…’ ಎಂದು ಗೋಳಾಡುತ್ತಾ ನರಳುತ್ತಾ ಇರುವವರು ಕೊನೆಗೆ ರೋಗವೇ ತಾವಾಗಿಬಿಡುತ್ತಾರೆ! ಹೀಗಾಗಿ ನಾವು ಏನನ್ನು ಪುನರಾವರ್ತಿತವಾಗಿ ಮಾಡುತ್ತೇವೋ, ಯಾವುದರ ಕುರಿತು ಸದಾ ಮಾತಾಡುತ್ತೇವೋ […]

ಕನ್ನಡ ಗಾದೆ ಮಾತು – ಅಟ್ಟ ಮೇಲೆ ಒಲೆ ಉರೀತು, ಕೆಟ್ಟ ಮೇಲೆ ಬುದ್ಧಿ ಬಂತು.‌

ಅಡಿಗೆ ಮಾಡಬೇಕು ಅನ್ನುವಾಗ ಒಲೆ ಉರಿದರೆ ಪ್ರಯೋಜನವೇ ಹೊರತು, ಅಡಿಗೆ ಆದ ಮೇಲೆ ಒಲೆ ಉರಿದರೆ ಪ್ರಯೋಜನವಿಲ್ಲ. ಹಾಗೆಯೇ ಬದುಕು ‌ಹಾಳಾದ ಮೇಲೆ ಬುದ್ಧಿ ಸರಿಯಾದರೆ ಅದರಿಂದ ಪ್ರಯೋಜನ ಇಲ್ಲ.  ಆದುದರಿಂದ, ನಾವು ಸಕಾಲದಲ್ಲಿ‌ ಸರಿಯಾದ ಬುದ್ಧಿಯಿಂದ ಆಲೋಚಿಸಿ, ಅಥವಾ ಬಲ್ಲವರಿಂದ ಮಾರ್ಗದರ್ಶನ ಪಡೆದು ನಮ್ಮ ಬಾಳನ್ನು ಸರಿಮಾಡಿಕೊಳ್ಳಬೇಕು. ಮನಸ್ಸಿಗೆ ತಕ್ಷಣ ನಾಟುವ ಹೋಲಿಕೆಯೊಂದಿಗೆ ಈ‌ ಗಾದೆ ಮಾತು ಒಂದು ಜೀವನ ಪಾಠವನ್ನು ಹೇಳಿದೆ.  Kannada proverb – Atta mele ole uriyithu, ketta mele […]

ಕನ್ನಡ ಗಾದೆ ಮಾತು – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

ಕನ್ನಡ ಭಾಷೆಯಲ್ಲಿರುವ ತುಂಬ ಪರಿಣಾಮಕಾರಿಯಾದ ಗಾದೆಮಾತುಗಳಲ್ಲಿ ಇದೂ ಒಂದು.‌ ಜಿಪುಣ ಬುದ್ಧಿಯ ಜನರ ವರ್ತನೆಯನ್ನು ಮೃದುವಾಗಿ ಟೀಕಿಸಲು ಈ ಗಾದೆಮಾತನ್ನು ಬಳಸುತ್ತಾರೆ. ಮನೆಯಲ್ಲಿ ನೆಂಟರು ಬಂದಾಗ ಅವರಿಗಾಗಿ ಅಡುಗೆ ಮಾಡಿ, ಊಟ ಹಾಕುವ ಸಂದರ್ಭದಲ್ಲಿ ಅಕ್ಕಿಯು ಖರ್ಚಾಗುವುದು ಸಹಜ. ಆದರೆ ತಮ್ಮ ವಸ್ತು ಖರ್ಚಾಗಬಾರದೆಂಬ ಲೋಭಿ ಮನಸ್ಸಿನ ಜನರು ತಮಗೆ ನೆಂಟರ ಮೇಲೆ ಪ್ರೀತಿ ಇದ್ದರೂ ‘ಅಯ್ಯೋ, ಇವರಿಗೆ ಊಟ ಹಾಕಿದರೆ ನಮ್ಮ ಮನೆಯ ಅಕ್ಕಿ ಖರ್ಚಾಗುತ್ತದಲ್ಲಾ…’ ಎಂದು ಮನಸ್ಸಿನಲ್ಲಿಯೇ ಹಳಹಳಿಸುತ್ತಾ, ಅಡುಗೆ ಮಾಡಲು ಹಿಂದೆ ಮುಂದೆ […]

ಕನ್ನಡ ಗಾದೆಮಾತು – ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.

ಚಿಕ್ಕವಯಸ್ಸಿನಲ್ಲಿ ನಾವು ಕಲಿತ ಶಾಲಾಪಾಠ ಅಥವಾ ಬದುಕಿನ ಪಾಠ ನಾವು ಮುದುಕರಾದರೂ ನಮ್ಮೊಂದಿಗೆ ಇರುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳ ತಂದೆತಾಯಿಗಳು, ಶಿಕ್ಷಕರು ಅವರಿಗೆ ತಾವು ಏನು ಕಲಿಸುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ‌ಚಿಕ್ಕವಯಸ್ಸಲ್ಲಿ ನಾವು ಕಲಿತ ಮಗ್ಗಿ, ಪದ್ಯಗಳು, ಕೇಳಿದ ಕಥೆಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತವೆಯಲ್ಲವೇ? ಅದನ್ನೇ ಈ ಗಾದೆಮಾತು ತುಂಬ ಪ್ರಾಸಬದ್ಧವಾಗಿ ಹೇಳಿದೆ.  Kannada proverb – Muuru varshada budhdhi nooru varahada thanaka( What is learnt at three stays […]

ಕನ್ನಡ ನಾಣ್ಣುಡಿ  – ಪರಸೊತ್ತು ಪಾಷಾಣ.

ನಾವು ಚಿಕ್ಕಮಕ್ಕಳಿದ್ದಾಗಿನಿಂದ ಕೇಳಿ ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿರುವ ಮಾತು ಇದು. ಇದರ ಅರ್ಥವೇನೆಂದರೆ, ಬೇರೆಯವರ ಆಸ್ತಿ ಅಥವಾ ಹಣವು ನಮ್ಮ ಮಟ್ಟಿಗೆ ವಿಷ ಇದ್ದ ಹಾಗೆ.‌ ಅದನ್ನು ನಾವು ಮುಟ್ಟಬಾರದು. ಹಣದ ವಿಷಯದಲ್ಲಿ‌ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಬುದ್ಧಿಮಾತು ಇರಲು ಸಾಧ್ಯವೇ? ಲಂಚಕೋರರು, ಮೋಸಗಾರರು ಅವಶ್ಯವಾಗಿ ಅರಿಯಬೇಕಾದ ಮಾತೆಂದರೆ ಇದೇ. Kannada saying – Parasoththu Pashaana( Other’s asset or money is poison to us).  This good old saying in Kannada […]

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.

ಇದು ಕನ್ನಡದಲ್ಲಿ ಬಹುವಾಗಿ ಬಳಸಲಾಗುವ ಒಂದು ಗಾದೆ ಮಾತು. ಮೊಸರಲ್ಲಿ ಕಲ್ಲು ಬರುವುದು ಸಾಧ್ಯವೇ ಇಲ್ಲ, ಆದರೆ ಗಂಡನಿಗೆ ಹೆಂಡತಿಯ ಮೇಲೆ ಅಸಮಾಧಾನ, ಸಿಟ್ಟು ಇದ್ದರೆ ಅವನ ಕಣ್ಣಿಗೆ ಅವಳಲ್ಲಿ ತಪ್ಪುಗಳೇ ಕಾಣುತ್ತವೆ. ಅವಳು ಬಡಿಸಿದ ಮೊಸರಿನಲ್ಲಿ ಕಲ್ಲು ಇಲ್ಲದಿದ್ದರೂ ಅದು ಸಿಗುತ್ತದೆ!! ಮತ್ತು ಇನ್ನೊಂದು ಹೊಸ ಜಗಳಕ್ಕೆ ಕಾರಣವಾಗುತ್ತದೆ. ಹೀಗೆಯೇ ತಮಗೆ ಮನಸ್ಸಿಲ್ಲ ಎಂದಾದರೆ ಮನುಷ್ಯರು ಏನೋ ಒಂದು ಕುಂಟುನೆಪ ಹೇಳಿ, ಅಥವಾ ಇಲ್ಲದಿರುವ ದೋಷವೊಂದನ್ನು ಹುಡುಕಿ ಆಡಿ ಸಂಬಂಧದಿಂದ ದೂರವಾಗುತ್ತಾರೆ ಅಥವಾ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆ. […]

ಹೌದಪ್ಪನ ಚಾವಡೀಲಿ ಹೌದಪ್ಪ, ಅಲ್ಲಪ್ಪನ ಚಾವಡೀಲಿ ಅಲ್ಲಪ್ಪ.

ಕೆಲವು ಜನರಿರುತ್ತಾರೆ, ಅವರಿಗೆ ಸ್ವಂತ ಅಭಿಪ್ರಾಯ, ಅನಿಸಿಕೆ ಅನ್ನುವುದೇ ಇರುವುದಿಲ್ಲ. ಯಾರು ಏನು ಹೇಳಿದರೂ ಹೌದು, ಹೌದು ಅನ್ನುತ್ತಾರೆ. ತುಸು ಮುಂಚೆ ತಾವು ಹೌದು ಎಂದು ಒಪ್ಪಿಕೊಂಡಿದ್ದ ವಿಷಯವನ್ನು ಎರಡು ಗಳಿಗೆಯ ನಂತರ ಇನ್ನೊಬ್ಬರು ಅಲ್ಲ ಅಂದೊಡನೆ ಇವರೂ ಸಹ ಅಲ್ಲ ಅನ್ನುತ್ತಾರೆ! ಇಂಥವರು ಬೌದ್ಧಿಕವಾಗಿ ಚಿಂತನ-ಮಂಥನ ನಡೆಸುವ ವಿಷಯದಲ್ಲಿ ಸೋಮಾರಿತನದಿಂದ ಹೀಗೆ ಮಾಡುವರೋ, ಅಥವಾ ಎದುರಿಗೆ ಇರುವವರನ್ನು ಮೆಚ್ಚಿಸಿ ಅವರಿಂದ ತಮಗೆ ಬೇಕಾದ ಸ್ವಾರ್ಥಸಾಧನೆ ಮಾಡಿಕೊಳ್ಳಲು ಹೀಗೆ ವರ್ತಿಸುವರೋ ಹೇಳಲಾಗದು. ಆದರೆ ಇಂಥವರನ್ನು ಯಾರೂ ಸಹ […]

ಅತ್ತೆಗೆ ಮೀಸೆ ಬಂದ್ರೆ ಚಿಕ್ಕಪ್ಪಾ ಅನ್ಬಹುದು

ತಮಾಷೆಯಾಗಿ ಕೇಳಿಸುವುದಾದರೂ ತುಂಬ ಅರ್ಥಗರ್ಭಿತವಾದ ಗಾದೆ ಮಾತಿದು. ಅತ್ತೆಗೆ ಮೀಸೆ ಬರುವುದೂ ಇಲ್ಲ, ಅವರನ್ನು ಚಿಕ್ಕಪ್ಪ ಅಂತ ಕರೆಯಲಾಗುವುದೂ ಇಲ್ಲ. ಯಾರಾದರೂ ಆಗದ ಹೋಗದ ಕೆಲಸಗಳ ಬಗ್ಗೆ ಮಾತಾಡಿದರೆ ಅಥವಾ ಪಾಲಿಸಲು ಸಾಧ್ಯವಾಗದ ವಾಗ್ದಾನಗಳನ್ನು ಕೊಟ್ಟರೆ ಈ ಗಾದೆ ಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ನೂರು ರೂಪಾಯಿ ಕೂಡ ಸಂಪಾದಿಸಲಾಗದವನು ತಾನು ಒಂದು ಲಕ್ಷ ರೂಪಾಯಿ ಉಡುಗೊರೆ ಕೊಡುವ ಮಾತಾಡಿದಾಗ ಅಥವಾ ಒಂದು ಹಾಡೂ ಬರದೆ ಇದ್ದವನು ಸಂಗೀತ ಕಛೇರಿ ಮಾಡುತ್ತೇನೆ ಎಂದಾಗ ಜನರು ಮೇಲಿನ ಗಾದೆ ಮಾತನ್ನು […]

ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

(ಕೊತ್ತಿ ಅಂದರೆ ಬೆಕ್ಕು. ಮೈಸೂರು ಕಡೆಯ ಕೆಲವು ಭಾಗಗಳಲ್ಲಿ ಬೆಕ್ಕಿಗೆ ಕೊತ್ತಿ ಎಂಬ ಪದವನ್ನೇ ಹೆಚ್ಚಾಗಿ ಬಳಸುತ್ತಾರೆ.) ಕೆಲವು ಸಲ ನಮಗೆ ನಮಗಿಂತ ಹೆಚ್ಚು ವಯಸ್ಸು, ಅನುಭವ ಅಧಿಕಾರವುಳ್ಳವರ ಮೇಲೆ ಕೋಪ ಬಂದರೆ ಅದನ್ನು ಅವರ ಮೇಲೆ ತೋರಿಸಲಾಗದೆ ಕಸಿವಿಸಿ ಪಡುತ್ತಿರುತ್ತೇವೆ. ಅಂತಹ ಹೊತ್ತಿನಲ್ಲಿ ನಮಗಿಂತ ಕಡಿಮೆ ವಯಸ್ಸು, ಅಧಿಕಾರ, ಅನುಭವ ಇರುವವರೇನಾದೂ ನಮ್ಮ ಎದುರಿಗೆ ಬಂದರೆ ಅವರ ಮೇಲೆ ಆ ಕೋಪವನ್ನು ತೋರಿಸಿಕೊಂಡು, ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಂಡುಬಿಡುತ್ತೇವೆ! ನಾವು ಯಾರ ಮೇಲೆ ರೇಗುತ್ತಿರುತ್ತೇವೋ ಅವರಿಗೆ […]

Page 16 of 20

Kannada Sethu. All rights reserved.