ಕನ್ನಡ ಗಾದೆಮಾತು –  ಹೊಟ್ಟೆ ತುಂಬಿದ್ರೆ ಹೋಳಿಗೆ ಸಪ್ಸಪ್ಪೆ.‌

ನಮಗೆ ಒಂದು ವಸ್ತು ಅಥವಾ ಒಂದು ವಿಷಯದ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೆ ಅಥವಾ ಅದರ ಅಗತ್ಯ ನಮಗಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ನಮ್ಮ‌ ಮನಸ್ಸಿನಲ್ಲಿ ಆ ವಸ್ತುವಿನ ಮೌಲ್ಯ‌ ಕಡಿಮೆ ಆಗುತ್ತದೆ! ಹೊಟ್ಟೆ ತುಂಬ ಊಟ ಮಾಡಿದ್ದು, ‘ಇನ್ನು ಒಂದು ತುತ್ತು ಸಹ ಬೇಡ’ ಅನ್ನಿಸುವವರಿಗೆ ಎಷ್ಟೇ ಸಿಹಿಯಾದ ಹೋಳಿಗೆ ಕೊಟ್ಟರೂ ‘ ಅಯ್ಯೋ, ನಂಗೆ ಬೇಡ. ಇದು‌ ಸಪ್ಪೆ ಸಪ್ಪೆ’ ಎಂದಾರು ಅವರು! ನಮ್ಮಮ‌ನಸ್ಸು ಜೀವನವನ್ನು ನಾವು ನೋಡುವ ಕ್ರಮವನ್ನು ಎಷ್ಟು ಪ್ರಬಲವಾಗಿ ಪ್ರಭಾವಿಸುತ್ತದೆ […]

ಭಾಷೆ ಕೇವಲ ಉಪಕರಣವೋ ಅಥವಾ ವ್ಯಕ್ತಿತ್ವದ ಪ್ರತಿಬಿಂಬವೋ? 

ಪದವಿ ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ, ಆಗಷ್ಟೇ ಪದವಿಪೂರ್ವ ಹಂತವನ್ನು ದಾಟಿ ಬಂದಿರುವ ಮೊದಲ ವರ್ಷದ ಹಲವು ಪದವಿ ವಿದ್ಯಾರ್ಥಿಗಳಲ್ಲಿ, ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಮೂಡಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ‌ಇದಕ್ಕೆ ಕೇವಲ ವಿದ್ಯಾರ್ಥಿಗಳು ಕಾರಣರಲ್ಲ.‌ ಹತ್ತನೇ ತರಗತಿಯವರೆಗೆ ಕನ್ನಡವನ್ನು ಅತ್ಯಂತ ಇಷ್ಟದಿಂದ ಓದುವ ಅನೇಕ ವಿದ್ಯಾರ್ಥಿಗಳಿರುತ್ತಾರೆ.‌ ಆದರೆ ಪದವಿಪೂರ್ವ ಹಂತಕ್ಕೆ ಬಂದಾಗ ವಿಷಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ‘ಕೋರ್ಸ್ ಸಬ್ಜೆಕ್ಟ್ಸ್’ ಮತ್ತು ‘ಲ್ಯಾಂಗ್ವೇಜಸ್’ ಎಂದು ವಿಭಾಗಿಸುವುದನ್ನು  ಮತ್ತು ಇವುಗಳಲ್ಲಿ ಮೊದಲನೆಯವು ‘ಮುಖ್ಯ’ ಹಾಗೂ ಎರಡನೆಯವು ‘ಅಮುಖ್ಯ’ […]

Degrees of freedom

ಸ್ವಾತಂತ್ರ್ಯದ ಮಟ್ಟಗಳು – ಪರಮಾಣುಗಳಲ್ಲಿ ಕಣಗಳು ಶಕ್ತಿಯನ್ನು ಪಡೆದುಕೊಳ್ಳುವ ಸ್ವತಂತ್ರ ರೀತಿಗಳು.

Degaussing

ನಿಷ್ಕಾಂತಗೊಳಿಸುವಿಕೆ – ಒಂದು‌ ವಸ್ತುವಿನ ಕಾಂತಕ್ಷೇತ್ರವನ್ನು ಅದಕ್ಕೆ ಸಮವಾಗಿರುವ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಕಾಂತಕ್ಷೇತ್ರದ ಬಳಕೆಯಿಂದ ತಟಸ್ಥಗೊಳಿಸುವುದು.

Decoupling

ಜೋಡಣೆ ಕಳಚುವಿಕೆ – ವಿದ್ಯುನ್ಮಂಡಲವೊಂದರಿಂದ ಯಾವುದಾದರೂ ಭಾಗವನ್ನು ತೆಗೆದುಬಿಡುವುದು.

Declinometer

ಇಳಿಜಾರು ಮಾಪಕ‌ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು‌ ಬಳಸುವ ಉಪಕರಣ.

Decay

ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ‌ ಮಾರ್ಪಾಟುಗೊಳ್ಳುವುದು.

ಕನ್ನಡ ಗಾದೆ ಮಾತು – ಮುತ್ತು ಕಳೆದರೆ ಸಿಕ್ಬಹುದು, ಹೊತ್ತು ಕಳೆದರೆ ಸಿಕ್ತದಾ? 

ಸಮಯದ ಮಹತ್ವವನ್ನು ತುಂಬ ಪರಿಣಾಮಕಾರಿಯಾಗಿ ಹೇಳುವ ಗಾದೆ ಮಾತಿದು.‌ ಮುತ್ತು‌ ಬೆಲೆಬಾಳುವ ವಸ್ತು ನಿಜ.‌ ಅದು ಒಂದು ವೇಳೆ ಕಳೆದುಹೋದರೆ, ಕಳಕೊಂಡವರ  ಅದೃಷ್ಟ ಚೆನ್ನಾಗಿದ್ದರೆ  ಆ ಮುತ್ತು ಮರಳಿ ಸಿಗುವ ಸಾಧ್ಯತೆ ಇದೆ.‌ ಆದರೆ ವ್ಯರ್ಥವಾಗಿ ಕಳೆದ ಸಮಯ ಮಾತ್ರ ಏನು‌ ಮಾಡಿದರೂ ಮತ್ತೆ ಸಿಗುವುದಿಲ್ಲ.‌ ಅದು ಶಾಶ್ವತವಾಗಿ ಹೊರಟು ಹೋದಂತೆಯೇ ಸರಿ.‌ ಅದಕ್ಕಾಗಿಯೇ ನಾವು ಹೊತ್ತನ್ನು ಮುತ್ತಿಗಿಂತ ಹೆಚ್ಚು ಮೌಲ್ಯಯುತವಾದುದು ಎಂದು ಅರಿತು ಜೋಪಾನ ಮಾಡಬೇಕು.   Kannada proverb – Muththu kaledare sikbahudu, hoththu […]

ಧಾಟಿ ಮೊದಲೋ, ಶಬ್ದ ಮೊದಲೋ? 

ಸಾಹಿತ್ಯ-ಸಂಗೀತಗಳಲ್ಲಿ ಆಸಕ್ತಿ ಇರುವವರನ್ನು ಕಾಡುವ ಒಂದು ಕುತೂಹಲಕರ ಪ್ರಶ್ನೆ ಇದು. ಹಾಡುಗಳ ತಯಾರಿಯಲ್ಲಿ‌ ರಾಗ ಮೊದಲೋ ಅಥವಾ ಪದಸೃಷ್ಟಿ ಮೊದಲೋ? ಎಂಬುದು.‌ ಇಲ್ಲಿನ ಸ್ವಾರಸ್ಯಕರ ಸಂಗತಿ‌ ಅಂದರೆ ಕೆಲವು ಸಲ ಮಾತು ಮೊದಲು –  ಭಾವಗೀತೆಗಳಲ್ಲಿ ಆಗುವಂತೆ, ಕೆಲವು ಸಲ ರಾಗ ಮೊದಲು – ಸಿನಿಮಾ ಹಾಡುಗಳಲ್ಲಿ ಆಗುವಂತೆ. ಇನ್ನು ಹಳೆಯ ಜಾನಪದ ಧಾಟಿಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಹೋದಂತೆ, ಪ್ರತಿ‌ ಹೊಸ ಪೀಳಿಗೆಯೂ ಅದಕ್ಕೆ ತನ್ನದೇ ಆದ ಶಬ್ದಗಳನ್ನು ಸೇರಿಸುತ್ತದೆ, ಅಂದರೆ ಇಲ್ಲಿ ರಾಗ […]

Dalton’s law

ಡಾಲ್ಟನ್ ರ ನಿಯಮ – ಅನಿಲಗಳ ಒಂದು‌ ಮಿಶ್ರಣದ ಒತ್ತಡವು ಆ ಮಿಶ್ರಣದಲ್ಲಿನ ಪ್ರತಿ ಬಿಡಿ ಅನಿಲದ ಒತ್ತಡಗಳ ಒಟ್ಟು ಮೊತ್ತವಾಗಿರುತ್ತದೆ  ಎಂದು ಸೂಚಿಸುವ ನಿಯಮವಿದು.

Page 103 of 140

Kannada Sethu. All rights reserved.