Katharometer

ಕ್ಯಾಥರೋಮೀಟರ್ -ಉಷ್ಣವಾಹಕತಾ ಮಾಪಕ – ಎರಡು ಅನಿಲಗಳ ಉಷ್ಣವಾಹಕತೆಗಳನ್ನು ಆ ಅನಿಲಗಳು ಸುತ್ತುವರಿದಿರುವಂತಹ ಕಾದ ಸುರುಳಿಗಳು ಕಳೆದುಕೊಳ್ಳುವ ಉಷ್ಣತೆಗಳನ್ನು ತುಲನೆ ಮಾಡುವ ಮೂಲಕ ಅಳೆಯುವಂತಹ ಒಂದು ಉಪಕರಣ.

ಕನ್ನಡ ಗಾದೆಮಾತು – ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ?

ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು. ಪುಟಾಣಿ ಅಳಿಲೊಂದು ಏರಿದರೆ ಬೃಹತ್ ಗಾತ್ರದ ಅರಳಿಮರ ಅಲ್ಲಾಡುವುದಿಲ್ಲ. ಹಾಗೆಯೇ ಜೀವನದಲ್ಲಿ ಶ್ರದ್ಧಾಭಕ್ತಿಗಳಿಂದ ಸಾಧನೆ ಮಾಡುತ್ತಿರುವವರು, ಕೆಲಸಕ್ಕೆ ಬಾರದ ಟೀಕೆಗಳು, ನಾಲಗೆ ಸಡಿಲ ಇರುವವರು ಆಡುವ ಅಬದ್ಧ ಮಾತುಗಳು, ಜೀವನದಲ್ಲಿ ದಿನಾ ಬರುತ್ತಲೇ ಇರುವ ಸಣ್ಣ ಪುಟ್ಟ ಕಿರಿಕಿರಿ-ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಅವುಗಳಿಂದ ವಿಚಲಿತರಾಗಿ ತಮ್ಮ ಸಾಧನೆಯನ್ನು ನಿಲ್ಲಿಸಬಾರದು, ಅರಳಿಮರದಂತೆ ಅವರು ಗಟ್ಟಿಯಾಗಬೇಕು. ಅಲ್ಲವೆ?  ಒಂದು ಮುಖ್ಯ ಜೀವನಕೌಶಲ್ಯವನ್ನು ಈ ಗಾದೆಮಾತು ಸಮರ್ಪಕವಾಗಿ ಹೇಳಿದೆ ಅನ್ನಿಸುತ್ತೆ. Kannada […]

ಎಸ್ಕೆಲೇಟರ್ ಗೆ ಕನ್ನಡ ಪದ ಯಾವುದು?

ವಿಮಾನ ನಿಲ್ದಾಣ, ದೊಡ್ಡ ದೊಡ್ಡ  ವಾಣಿಜ್ಯ  , ಬೆಂಗಳೂರಿನ  ‘ನಮ್ಮ ಮೆಟ್ರೊ’ ರೈಲು ವ್ಯವಸ್ಥೆ ಇಲ್ಲೆಲ್ಲ ನಾವು, ತಾನೇ ಮೇಲಕ್ಕೆ ಕೆಳಕ್ಕೆ ಚಲಿಸುತ್ತಾ ಜನರ ಹತ್ತುವಿಕೆ, ಇಳಿಯುವಿಕೆಗಳನ್ನು ಸುಲಭ ಮಾಡುವ ‘ಎಸ್ಕೆಲೇಟರ್’ ಗಳನ್ನು ಬಳಸುತ್ತೇವಲ್ಲ? ಅದನ್ನು ನೋಡಿದಾಗೆಲ್ಲ ‘ಇದಕ್ಕೆ ಕನ್ನಡದಲ್ಲಿ ಏನಂತಾರೆ?’ ಅನ್ನುವ ಪ್ರಶ್ನೆಯು ನನ್ನ  ಮನಸ್ಸಿನಲ್ಲಿ ಏಳುತ್ತಿತ್ತು. ಈಚೆಗೆ, ನಮ್ಮ ಪರಿಚಿತರಾದ ‘ಲೈಟಿಂಗ್ ಕೃಷ್ಣಪ್ಪ’ ಎಂಬ ಬೆಳಕು ಕರ್ಮಿ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದಕ್ಕೆ  ಉತ್ತರ ಸಿಗಲು ನಿಮಿತ್ತವಾದರು. ಲೈಟಿಂಗ್ ಕೃಷ್ಣಪ್ಪ ನಮ್ಮ ನಾಟ್ಯ ಸಂಸ್ಥೆ […]

Kappline

ಕ್ಯಾಪ್ ಲೈನ್ – ಕ್ಯಾಪ್ ಲೈನ್ – ಕಾಂತೀಯ ಬಲರೇಖೆಗಳ ಒಂದು‌ ಮೂಲಮಾನ. ಇದು 6000 ಮಾಕ್ಸ್ವೆಲ್ ಗಳಿಗೆ ಸಮ.

Kaonic atom

ಕೇಯಾನಿಕ್ ಆಟಮ್ – ಕೇಯಾನೀಯ ಪರಮಾಣು‌ – ಒಂದು ಸಾಧಾರಣ ಬೀಜಕೇಂದ್ರದ ಸುತ್ತ ಋಣಾತ್ಮಕ ವಿದ್ಯುದಂಶವುಳ್ಳ ಕೇಯಾನು ಸುತ್ತುತ್ತಿದ್ದರೆ ಅಂತಹ ಪರಮಾಣುವನ್ನು ಕೇಯಾನೀಯ ಪರಮಾಣು ಎನ್ನುತ್ತಾರೆ.

Kaon

ಕೇಯಾನು – ಒಂದು ಕೆ-ಮೆಸಾನು ( ಮೆಸಾನು = ಎಲೆಕ್ಟ್ರಾನುಗಳಿಗಿಂತ ಭಾರವಾದ ಆದರೆ ಪ್ರೋಟಾನುಗಳಿಗಿಂತ ಹಗುರವಾದ ಮೂಲಭೂತ ಕಣಗಳು)

Junction rectifier

ಜಂಕ್ಷನ್ ರೆಕ್ಟಿಫೈಯರ್ – ಕೂಡುಬಿಂದು ಪರಿವರ್ತಕ‌ – ಅರೆವಾಹಕ ಕೂಡುಬಿಂದುವನ್ನು ಆಧರಿಸಿದ ಪರಿವರ್ತಕ.

Junction detector

ಜಂಕ್ಷನ್ ಡಿಟೆಕ್ಟರ್ – ಕೂಡುಬಿಂದು‌ ಪತ್ತೆಯಂತ್ರ – ಹಿಮ್ಮುಖ ವಿದ್ಯುತ್ ಸಾಮರ್ಥ್ಯವುಳ್ಳ ಅರೆವಾಹಕ ಕೂಡುಸ್ಥಳದಲ್ಲಿನ ವಿದ್ಯುತ್ ಪಾತದ ಕೂಡುಬಿಂದುವಿನಲ್ಲಿ ವಿದ್ಯುತ್ ವಿಕಿರಣವನ್ನು ಅಳೆಯುವ ಉಪಕರಣ.

ಕನ್ನಡ ಗಾದೆಮಾತು – ಕೊಟ್ಟೋನ್ ಕೋಡಂಗಿ, ಈಸ್ಕೊಂಡೋನ್ ಈರ್ಬದ್ರ.

ವ್ಯವಹಾರ ಪ್ರಪಂಚದಲ್ಲಿ  ಮತ್ತು ಕೆಲವೊಮ್ಮೆ ಭಾವನಾತ್ಮಕ ಸನ್ನಿವೇಶ ಗಳಲ್ಲೂ ಕೂಡ ಬಹಳವಾಗಿ ಸಲ್ಲುವ  ಗಾದೆಮಾತು ಇದು. ಅಪ್ರಾಮಾಣಿಕ ವ್ಯಕ್ತಿಗಳಿಗೆ ಸಾಲ ಕೊಟ್ಟು, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಅಥವಾ ದುಬಾರಿ ಬಟ್ಟೆ, ಒಡವೆ, ಪುಸ್ತಕಗಳನ್ನು ಕಡ ಕೊಟ್ಟು ಅದನ್ನು‌  ಕಳೆದುಕೊಳ್ಳುವ ಸನ್ನಿವೇಶ ಬಂದಾಗ  ಈ ಗಾದೆಮಾತನ್ನು ಬಳಸುತ್ತಾರೆ. ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಅಪಾತ್ರರ ಮೇಲೆ ಇಟ್ಟಾಗಲೂ ಹೀಗೆ ಆಗಬಹುದು‌. ಆಗ ಕೊಟ್ಟವನು ಬಯಲಾಟದ ಕೋಡಂಗಿ‌ ವೇಷದಂತೆ ಮೂರ್ಖನಾಗಿ, ಹಾಸ್ಯಾಸ್ಪದವಾಗಿ ಕಂಡರೆ ತೆಗೆದುಕೊಂಡವನು ದಕ್ಷಯಾಗ ಕಥೆಯ ಶಿವಕುಂತಲ ಜನ್ಯ […]

ಕನ್ನಡತನವನ್ನು  ಈ ಕಾಲದಲ್ಲಿ ಉಳಿಸಿ,  ಬೆಳೆಸುವುದು ಹೇಗೆ?

“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ, ಕುವೆಂಪು ಅವರ ಪ್ರಸಿದ್ಧ ಕವಿತೆಯಲ್ಲಿ “ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು” ಎಂಬ ಒಂದು ಸಾಲು ಬರುತ್ತದೆ. ಈ ಮಾಹಿತಿ‌ ತಂತ್ರಜ್ಞಾನ ಯುಗದಲ್ಲಿ, ಗೂಗಲಪ್ಪ ಮತ್ತು ಯೂಟ್ಯೂಬಮ್ಮನ ಆಳ್ವಿಕೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ‌.  ಇದರಲ್ಲಿ ಎರಡು ವಿಷಯಗಳು ಬಹಳ ಮುಖ್ಯ ಅನ್ನಿಸುತ್ತವೆ.‌ ಒಂದು ಇಂದಿನ ಹೊಸ ಹೊಸ ‘ಜಾಣ ಉಪರಣಗಳಿಗೆ’ ಒಗ್ಗುವಂತೆ, ಸಲ್ಲುವಂತೆ ಕನ್ನಡವನ್ನು ಸಬಲಗೊಳಿಸುವುದು‌, ಮತ್ತು […]

Page 14 of 128

Kannada Sethu. All rights reserved.