Impedence ( symbol Z)

 ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು  ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.

Immersion objective

ಇಮ್ಮರ್ಶನ್ ಆಬ್ಜೆಕ್ಟಿವ್ – ಮುಳುಗಿಸಿಟ್ಟ ಮಸೂರ – ಸೂಕ್ಷ್ಮದರ್ಶಕದಲ್ಲಿ ಇರುವಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಒಂದು ರೀತಿಯ ವಸ್ತುಮಸೂರ ಇದು. ( ವಸ್ತು ಮಸೂರ = ನೋಡುತ್ತಿರುವ ವಸ್ತುವಿಗೆ ಅತ್ಯಂತ ಹತ್ತಿರ ಇರುವ ಮಸೂರ).

ಕನ್ನಡ ಗಾದೆಮಾತು – ಎಂಜಲು ಕೈಯಿಂದ ಕಾಗೇನೂ ಅಟ್ಟೋನಲ್ಲ. 

ಕನ್ನಡದ ಬಹು ಪ್ರಸಿದ್ಧವಾದ ಹಾಗೂ ತುಂಬ ಚಿತ್ರಕಶಕ್ತಿಯ ಗಾದೆ ಮಾತು ಇದು. ನಮ್ಮ ನಡುವೆ ಇರುವ ಜಿಪುಣರನ್ನು ಕುರಿತು ಹೇಳಿರುವ ಮಾತು.‌ ಎಂಜಲು ಕೈ ಅಂದರೆ ಊಟ ಮಾಡಿ ಇನ್ನೂ ತೊಳೆಯದ ಕೈ‌. ಅದಕ್ಕೆ ಅನ್ನದ ಒಂದೆರಡು ಅಗುಳುಗಳು ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ. ಅದರಿಂದ ಕಾಗೆಯನ್ನು ಓಡಿಸಿದರೆ ಆ ಅಗುಳುಗಳು ನೆಲಕ್ಕೆ ಬಿದ್ದು ಜಿಪುಣನಿಗೆ ನಷ್ಟ ಆಗುತ್ತದಲ್ಲವೆ!? ಅದಕ್ಕಾಗಿಯೇ ಅವನು ಎಂಜಲು ಕೈಯಲ್ಲಿ ಕಾಗೆಯನ್ನು ಅಟ್ಟುವುದಿಲ್ಲ (ಓಡಿಸುವುದಿಲ್ಲ)! ಜಿಪುಣರನ್ನು ಲಘುವಾಗಿ ತಮಾಷೆ ಮಾಡುವ ಗಾದೆ ಮಾತು ಇದು.  Kannada […]

‘ಕನ್ನಡ ಕಲಿಯಿರಿ, ನಮ್ಮಲ್ಲೊಬ್ಬರಾಗಿರಿ’ -ಅಂಗಡಿಯೊಂದರಲ್ಲಿ ಕಂಡ ವಿಶಿಷ್ಟ ಕನ್ನಡ ಜಾಗೃತಿ ಸಂದೇಶ

ಈಚೆಗೆ ಜಯನಗರದ ಒಂದು ಅನುಕರಣಾ ಒಡವೆ ( ಇಮಿಟೇಷನ್ ಜುವೆಲ್ರಿ) ಅಂಗಡಿಗೆ ಹೋಗಿದ್ದೆ‌. ಅಲ್ಲಿ ಕಂಡ ಒಂದು ಆಂಗ್ಲಭಾಷಾ ಸೂಚನಾಫಲಕವು ನನಗೆ ಅಚ್ಚರಿ, ಸಂತಸ ತಂದದ್ದಲ್ಲದೆ ನನ್ನ ಮನಸ್ಸನ್ನು ಯೋಚನೆಗೂ ಹಚ್ಚಿತು. ಆ ಸೂಚನಾಫಲಕದಲ್ಲಿ ಹೀಗೆ ಬರೆಯಲಾಗಿತ್ತು‌ –  ‘Dear customer, if you live here and do not know Kannada, please learn and be one among us. Do not be a guest forever’. ( ಪ್ರಿಯ ಗ್ರಾಹಕ, […]

Impact velocity

 ಇಂಪ್ಯಾಕ್ಟ್ ವೆಲಾಸಿಟಿ – ಅಪ್ಪಳಿಸುವ ವೇಗ – ಮುಂದಕ್ಕೆ ಚಿಮ್ಮಿಸಿದಂತಹ ವಸ್ತುವು( ಉದಾಹರಣೆಗೆ  ಕ್ಷಿಪಣಿ ) ಅಪ್ಪಳುಸುವ ಕ್ಷಣದಲ್ಲಿ ಹೊಂದಿರುವಂತಹ ದಿಶಾವೇಗ.  ಇದನ್ನು ಅಪ್ಪಳಿಸುವ ದಿಕ್ವೇಗ ಎಂದೂ ಕರೆಪದಪ್ರಯೋಗ

Impact stress

ಇಂಪ್ಯಾಕ್ಟ್ ಸ್ಟ್ರೆಸ್ – ಆಘಾತಮೂಲೀ ಒತ್ತಡ – ಏಕಘಟಕ ವಿಸ್ತೀರ್ಣದ ಮೇಲೆ ಇದ್ದಕ್ಕಿದ್ದಂತೆ ಬಿದ್ದ ಹೊರೆಯಿಂದಾಗಿ ಅನುಭವಕ್ಕೆ ಬರುವ ಬಲ‌.

Impact strength

ಇಂಪ್ಯಾಕ್ಟ್ ಸ್ಟ್ರೆಂಗ್ತ್  – ಒಂದು ವಸ್ತುವಿಗೆ ಇರುವ ಆಘಾತಧಾರಣ ಸಾಮರ್ಥ್ಯ ( ಇದ್ದಕ್ಕಿದ್ದಂತೆ ಉಂಟಾಗುವ ಆಘಾತವನ್ನು ತಡೆದುಕೊಳ್ಳುವ ಶಕ್ತಿ).

Image space

ಇಮೇಜ್ ಸ್ಪೇಸ್ – ಬಿಂಬ ರೂಪಣಾ ಸ್ಥಳ ( ಜಾಗ) – ಒಂದು ದೃಶ್ಯ ವಿಜ್ಞಾನ ವ್ಯವಸ್ಥೆಯಲ್ಲಿ ನಿಜವಾದ ಅಥವಾ ನಿಜಭಾಸ( ವರ್ಚುಯಲ್)  ಬಿಂಬಗಳನ್ನು ರೂಪಿಸುವಂತಹ ಜಾಗ.

Image plane

ಇಮೇಜ್ ಪ್ಲೇನ್ – ಬಿಂಬ ಮೇಲ್ಮೈ – ಬಿಂಬವನ್ನು ಕೇಂದ್ರವಗಿ  ಹೊಂದಿರುವ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈ.

ಕನ್ನಡ ಗಾದೆಮಾತು – ಕಡುಕೋಪ ಬಂದಾಗ ತಡಕೊಂಡವನೇ ಜಾಣ.

ಕೋಪ ಬರದ ಮನುಷ್ಯರಿಲ್ಲ.‌ ಮನಸ್ಸಿಗೆ ಇಷ್ಟವಾಗದ್ದು ನಡೆದರೆ, ಯಾರಾದರೂ ತೊಂದರೆ ಮಾಡಿದರೆ, ಬದುಕು ಅಸಹಾಯಕ ಪರಿಸ್ಥಿತಿಗೆ ಒಡ್ಡಿದರೆ ಮನುಷ್ಯರಿಗೆ ಕೋಪ ಬರುತ್ತದೆ. ಕೋಪ ಬರುವುದು ಅಸಹಜ ಅಲ್ಲ. ಆದರೆ ಕೋಪ ಬಂದಾಗ ಅದನ್ನು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ಮುಖ್ಯ ವಿಷಯ. ಸುಮ್ಮನಿದ್ದು ಬಿಡುವುದೋ, ಆ ಜಾಗ ಬಿಟ್ಟು ಸ್ವಲ್ಪ ದೂರ ಹೋಗುವುದೋ, ದೀರ್ಘ ಉಸಿರುಗಳನ್ನು  ತೆಗೆದುಕೊಳ್ಳುವುದೋ ಇಂಥವನ್ನು ಮಾಡಬೇಕು‌‌. ಅದು ಬಿಟ್ಟು ಕೋಪ, ಅದರಲ್ಲೂ ಕಡುಕೋಪ( ಅತಿ ಹೆಚ್ಚಿನ ಕೋಪ) ಬಂದರೆ ನಾವು ಪ್ರತಿಕ್ರಯಿಸಿದೆವು ಅಂದರೆ ಎದುರಿಗಿರುವ […]

Page 30 of 129

Kannada Sethu. All rights reserved.