ಆಂಗ್ಲೀಕರಣಗೊಂಡ ತರಕಾರಿ ಮಳಿಗೆ!

ಕಲರ್ ಕ್ಯಾಪ್ಸಿಕಂ, ಬೀನ್ಸ್,, ಪಿಯರ್, ಪೋಮೊಗ್ರಾನೇಟ್, ಪಪಾಯ, ಲಿಚೀ, ಬಟರ್ ಫ್ರೂಟ್ …. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಣ್ಣು ತರಕಾರಿ ಮಳಿಗೆಗಳಿಗೆ ಹೋದರೆ ಕಿವಿಗೆ ಬೀಳುವ ಪದಗಳಿವು‌. ಹುರುಳಿಕಾಯಿ, ಚವುಳಿಕಾಯಿ, ದೊಣ್ಣೆಮೆಣಸು, ಪರಂಗಿ ಹಣ್ಣು, ಕಣ್ಗುಡ್ಡೆ ಕಾಯಿ, ಬೆಣ್ಣೆಹಣ್ಣು…ಈ ಕನ್ನಡ ಪದಗಳು ಕಿವಿಗೆ ಬೀಳುವುದು ತೀರಾ ಅಪರೂಪ.‌ ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದೆ‌. ಎರಡು ಕಾರಣಗಳಿವೆ ಅನ್ನಿಸಿತು. 1. ಬೆಂಗಳೂರಿನಲ್ಲಿ ಕನ್ನಡಿಗರಲ್ಲದೆ ಹಿಂದಿ, ಮಾರ್ವಾಡಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಕನ್ನಡೇತರ ಭಾಷೆಗಳನ್ನು ಮಾತಾಡುವ ಜನರ […]

Luminescence

ಲ್ಯೂಮಿನಿಸೆನ್ಸ್ – ಸ್ವಯಂಪ್ರಕಾಶ – ಒಂದು ವಸ್ತುವು ಶಕ್ತಿಯನ್ನು ‌ಹೀರಿಕೊಂಡು‌ ಉದ್ರೇಕಿತ ಸ್ಥಿತಿಗೆ ಹೋದಾಗ ಅದರಿಂದ ಸೂಸುವ ಬೆಳಕು ಅಥವಾ ವಿಕಿರಣ. ಹೀಗೆ ವಿದ್ಯುತ್ಕಾಂತೀಯ ಅಲೆಗಳನ್ನು ಹೊರಸೂಸಿದ ಬಳಿಕ ಆ ವಸ್ತುಗಳು ಕಡಿಮೆ ಶಕ್ತಿ ಮಟ್ಟಕ್ಕೆ ಮರಳುತ್ತವೆ. ಸ್ವಯಂಪ್ರಕಾಶದಲ್ಲಿ ಜೈವಿಕ‌ ಸ್ವಯಂ ಪ್ರಕಾಶದಿಂದ ಹಿಡಿದು ರಾಸಾಯನಿಕ ಸ್ವಯಂಪ್ರಕಾಶದ ತನಕ ಅನೇಕ ವಿಧಗಳಿರುತ್ತವೆ.

Luminance, symbol : Lv

Lv – ಲ್ಯೂಮಿನೆನ್ಸ್ : ಸಿಂಬಲ್ ಎಲ್ ವಿ‌ – ಪ್ರಕಾಶಮಾನತೆ, ಸಂಕೇತ ಎಲ್ ವಿ – ಬಿಂದು‌ ಆಕರವಲ್ಲದ, ವಿಸ್ತರಿತ ಬೆಳಕು ನೀಡುವ ಬೆಳಕಿನ ಆಕರದ ಪ್ರಕಾಶಮಾನತೆಯ ಅಳತೆ.‌ ಒಂದು ದತ್ತ ದಿಕ್ಕಿನಲ್ಲಿ, ಏಕಘಟಕ ವಿಸ್ತೀರ್ಣದ ಪ್ರದೇಶಕ್ಕೆ ಆ ಆಕರವು ಲಂಬಕೋನದಲ್ಲಿ ಬೀರಿದಂತಹ ಪ್ರಕಾಶದ ತೀಕ್ಷ್ಣತೆ ಇದು‌.

Lumen, symbol – lm

ಲ್ಯೂಮೆನ್, ಸಿಂಬಲ್ lm – ಲ್ಯೂಮೆನ್, ಸಂಕೇತ lm – ಪ್ರಕಾಶಮಾನ‌ ಬಲದ ಎಸ್.ಐ.ಮೂಲಮಾನ. ಬೆಳಕಿನ‌ ಆಕರವು ಸೂಸುವ ಪ್ರಕಾಶಮಾನ ಬಲದ ಅಳತೆಯನ್ನು ಈ ಮೂಲಮಾನದಿಂದ ಹೇಳಲಾಗುತ್ತದೆ.

Lubrication

ಲ್ಯೂಬ್ರಿಕೇಷನ್ – ತೈಲ ಲೇಪನ – ಒಂದನ್ನೊಂದು ಸ್ಪರ್ಶಿಸಿ‌ ಚಲಿಸುತ್ತಿರುವ ಎರಡು ಘನ ಮೇಲ್ಮೈ ಗಳ ನಡುವಿನ ನೇರಸಂಪರ್ಕವನ್ನು ತಪ್ಪಿಸಲು ಅವುಗಳ ನಡುವೆ ಒಂದು ವಸ್ತುವನ್ನು ಹಚ್ಚುವುದು‌. ಇದರಿಂದಾಗಿ ಆ ಘನಮೇಲ್ನೈಗಳ ನಡುವಿನ‌ ಘರ್ಷಣೆ ಕಡಿಮೆ ಆಗುತ್ತದೆ.

Low tension

ಲೋ ಟೆನ್ಶನ್ – ಕಡಿಮೆ ಕರ್ಷಣ – ಕಡಿಮೆ ವಿದ್ಯುದ್ಬಲ

ಕನ್ನಡ ಗಾದೆಮಾತು – ಜಿದ್ದು, ಜೀವಕ್ಕೆ ಗುದ್ದು‌.

 ಜಿದ್ದು ಎಂಬ ಪದಕ್ಕೆ ನಿಘಂಟಿನಲ್ಲಿ ಬದ್ಧ ಮಾತ್ಸರ್ಯ, ವೈರ, ಹಠ, ಸೇಡು ಮುಂತಾದ ಅರ್ಥಗಳಿವೆ. ಒಟ್ಟಿನಲ್ಲಿ ಇವೆಲ್ಲವೂ ನಕಾರಾತ್ಮಕ ಭಾವನೆಗಳು.‌ ಇನ್ನೊಬ್ಬರ ಬಗ್ಗೆ ಹಗೆತನ ಸಾಧಿಸುವುದು, ದ್ವೇಷ ಇಟ್ಟುಕೊಳ್ಳುವುದು … ಇವೆಲ್ಲ ನಮ್ಮ ಜೀವಕ್ಕೆ ಆರಾಮ ತರುವ ವಿಷಯಗಳಲ್ಲ.  ಜೀವಕ್ಕೆ ಗುದ್ದು ಕೊಟ್ಟಂತೆ ನಮಗೆ ಕಷ್ಟ ಕೊಡುವ ಅನುಭವಗಳು ಇವು. ದುರ್ಯೋಧನನು ಪಾಂಡವರ ಮೇಲೆ ಜಿದ್ದು ಇಟ್ಟುಕೊಂಡು ತನ್ನ ಸಕಲ ಸಾಮ್ರಾಜ್ಯವನ್ನು ಮತ್ತು ನೆಮ್ಮದಿಯನ್ನು ಕಳೆದುಕೊಂಡಂತೆ ಇದು. ಹೀಗಾಗಿ ನಾವು‌ ಜಿದ್ದು ಎಂಬ ವಿಷವನ್ನು ನಮ್ಮೊಳಗೆ ಇಟ್ಟುಕೊಳ್ಳಬಾರದೆಂಬ […]

‘ಸ್ವಚ್ಛತೆಯೇ ದೇವರು ಮಗು’‌ ಎಂದ ಕವಿ‌ ಪುತಿನ‌

 ನನ್ನ ಸಾಹಿತ್ಯ ಜೀವನದ ಮರೆಯಲಾಗದ ನೆನಪುಗಳಲ್ಲಿ ಒಂದು ಎಂದರೆ, ಕವಿ ಪುತಿನ ( ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್ – ಕನ್ನಡ ನವೋದಯ ಸಂದರ್ಭದ ಹಿರಿಯ ಕವಿ ಹಾಗೂ ನಾಟಕಕಾರ – ಜೀವಿತ ಕಾಲ : 1905-1998 ) ಅವರನ್ನು ಮುಖತಃ ಭೇಟಿ ಮಾಡಿದ್ದು.  1991 ನೇ ವರ್ಷ ಅದು. ನಾನು ಬೆಂಗಳೂರಿನ ಬಸವೇಶ್ವರ ನಗರದ ‘ವಿದ್ಯಾವರ್ಧಕ ಸಂಘ’ ಕಾಲೇಜಿನಲ್ಲಿ ಬಿ.ಎಸ್ಸಿ. ಅಂತಿಮ‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ.‌ ರಸಾಯನಶಾಸ್ತ್ರ‌ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಪರಿಣತಿ ಇದ್ದ, […]

Page 3 of 3

Kannada Sethu. All rights reserved.