Damping

ಕ್ಷೀಣಗೊಳ್ಳುವಿಕೆ ಅಥವಾ ಕುಗ್ಗುವಿಕೆ – ತೂಗಾಡುತ್ತಿರುವ ಒಂದು ವ್ಯವಸ್ಥೆಯ ಶಕ್ತಿಯು ಕುಗ್ಗುತ್ತಾ ಬರುವುದರಿಂದ, ಅದರ ತೂಗಾಟ ಅಥವಾ ಆಂದೋಲನಗಳ ಅಲೆಯೆತ್ತರವು ಕಡಿಮೆಯಾಗುತ್ತಾ ‌ಬರುವುದು.‌ 

ಕನ್ನಡ ಗಾದೆಮಾತು – ಉಪ್ಪು ತಿಂದೋರು ನೀರು ಕುಡೀಲೇಬೇಕು. 

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಉಪ್ಪು ತಿಂದ ಮೇಲೆ ಬಾಯಾರಿಕೆ ಆಗುವುದು ಪ್ರಕೃತಿ ಸಹಜ. ಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ದೇಹದ ಜೀವಕೋಶಗಳಲ್ಲಿ ಉಪ್ಪಿನ ಅಂಶ ಅಗತ್ಯಕ್ಕಿಂತ ಹೆಚ್ಚಾದಾಗ ಅವುಗಳಲ್ಲಿ ಸಮತೋಲನ ತಪ್ಪಿ ಅಸುಖವುಂಟಾಗಿ ಅವು ನೀರಿಗಾಗಿ ಹಂಬಲಿಸುತ್ತವೆ. ನೀರು ಜೀವಕೋಶದೊಳಗೆ ಬಂದಾಗ ಉಪ್ಪು ಹೊರ ಹೋಗುತ್ತದೆ ಮತ್ತು ಜೀವಕೋಶವು ತನ್ನ ಸಮತೋಲನ ಸ್ಥಿತಿಗೆ ಮರಳುತ್ತದೆ.  ನಮ್ಮ ಹಿರಿಯರು ಶಾಸ್ತ್ರೀಯವಾಗಿ ಜೀವವಿಜ್ಞಾನವನ್ನು ಓದಿಕೊಂಡಿರದಿದ್ದರೂ ಜೀವನಾನುಭವದಿಂದ ಈ ಸಂಗತಿಯನ್ನು ಗ್ರಹಿಸಿ, ಇದಕ್ಕೆ ಹೋಲುವಂತೆ,  ತಪ್ಪು ಮಾಡಿದವರು‌ ಶಿಕ್ಷೆ […]

ಅಗಲಿದ ಸ್ನೇಹಿತನ‌ ಹೆಸರನ್ನು ತನ್ನ ಕಾವ್ಯನಾಮಕ್ಕೆ ಸೇರಿಸಿಕೊಂಡ ಕನ್ನಡ ಕವಿ

ಸಂತೆಬೆನ್ನೂರು ಫೈಜ್ನಟ್ರಾಜ್  – ವಿವಿಧ ಕನ್ನಡ ಪತ್ರಿಕೆಗಳಲ್ಲಿ ಈ ಹೆಸರು ಓದಿದಾಗ ನನಗೆ ಕುತೂಹಲ ಮೂಡುತ್ತಿತ್ತು.‌ ಇದೆಂತಹ ಹೆಸರು? ಫೈಜ್ ಎಂಬ ಮುಸಲ್ಮಾನ ಹೆಸರು ಮತ್ತು ನಟರಾಜ್ ಎಂಬ ಹಿಂದೂ ಹೆಸರುಗಳು ಒಟ್ಟು ಸೇರಿದ್ದು ಹೇಗೆ? ಇದು ಹಿರಿಯರು ತಮ್ಮ ಮನೆಯ ಮಗುವಿಗೆ ಇಟ್ಟಿರಬಹುದಾದ ಹೆಸರೇ? ಅಥವಾ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ಈ  ರೀತಿಯ ಹೆಸರುಗಳನ್ನೇನಾದರೂ ಇಡುತ್ತಾರೆಯೇ?……ಹೀಗೆ ಕೆಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತಿದ್ದವು.          ಈಚೆಗೆ ಒಂದು ದಿನ ಈ ಪ್ರಶ್ನೆಗೆ […]

ಕನ್ನಡ ಗಾದೆಮಾತು –   ಹಸಿದು ಉಣದಿರಬೇಡ, ಹಸಿಯದೆ ಉಣಬೇಡ.

ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]

ಊಟದ ತಟ್ಟೆಗೆ ಅದೆಷ್ಟು ಹೆಸರುಗಳು!!

ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ.  ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ […]

Cyclotron

ಕಣ ವೇಗವರ್ಧಕ – ಕಣಗಳ ವೇಗವನ್ನು ಹೆಚ್ಚಿಸುವ ಉಪಕರಣಗಳ ವಿಧಗಳಲ್ಲಿ ಒಂದು.

Cycloid

ಕಮಾನುರೇಖೆ – ಒಂದರ ಪಕ್ಕ ಒಂದರಂತೆ ಕಮಾನುಗಳನ್ನು ಇಟ್ಟಂತೆ ತೋರುವಂತಹ ರೇಖೆಯಲ್ಲಿ ಚಲಿಸುವ ಬಿಂದುವಿನ ಚಲನೆ. 

Cycle 

ಆವರ್ತನ / ಸುತ್ತು – ಒಂದು‌ ವ್ಯವಸ್ಥೆಯು‌ ಒಳಗಾಗುವಂತಹ ಬದಲಾವಣೆಗಳ ಅಥವಾ ಕಾರ್ಯಾಚರಣೆಗಳ  ಒಂದು ಸರಣಿ ಅಥವಾ ಒಂದು‌ ಕಟ್ಟು. ಇವು ಮುಗಿಯುತ್ತಿದ್ದಂತೆ ವ್ಯವಸ್ಥೆಯು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ. 

Current

ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹವಿದು. ವಿದ್ಯುತ್ ಚಾಲಕ‌ ಶಕ್ತಿಯ ಪ್ರಭಾವದಿಂದಾಗಿ ಎಲೆಕ್ಟ್ರಾನುಗಳು ಅಥವಾ ವಿದ್ಯುದಣುಗಳು (ಅಯಾನುಗಳು) ಚಲಿಸುವುದರ ಫಲವೇ ವಿದ್ಯುತ್ಪ್ರವಾಹ.

Curie point

ಕ್ಯೂರಿ ಬಿಂದು‌ ಅಥವಾ ಕ್ಯೂರಿ ಉಷ್ಣತೆ – ಯಾವ ಉಷ್ಣತೆಯ ಮೇಲ್ಪಟ್ಟು ಸಹಜ ಅಯಸ್ಕಾಂತೀಯ ವಸ್ತುಗಳು ದುರ್ಬಲ ಅಯಸ್ಕಾಂತೀಯ ವಸ್ತುಗಳಂತೆ ವರ್ತಿಸುತ್ತವೋ ಆ ಉಷ್ಣತೆ.

Page 105 of 140

Kannada Sethu. All rights reserved.