Cloud chamber

ಮೋಡ ಕೋಣೆ ಅಥವಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥಗಳನ್ನು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.

`ಬೆಟ್ಟಕ್ಕೆ ಮಣ್ಣು ಹೊತ್ತಂಗೆ’

ಕನ್ನಡದಲ್ಲಿ ಬಹಳವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ಮಾಡುವ ಕೆಲಸವು ಯಾವುದೇ ಫಲ ನೀಡದಿದ್ದಾಗ ಜನರು ಈ ಗಾದೆಮಾತನ್ನು ಬಳಸುತ್ತಾರೆ. ವರ್ಷವಿಡೀ ಓದಿ ವಿದ್ಯಾರ್ಥಿಯೊಬ್ಬ ಅನುತ್ತೀರ್ಣನಾದಾಗ, ಅಥವಾ ಬಹಳ ಕಾಲ ಕಷ್ಟ ಪಟ್ಟರೂ ಅಂದುಕೊಂಡದ್ದನ್ನು ಸಾಧಿಸಲಾಗದಿದ್ದಾಗ `ಅಯ್ಯೋ, ಇಷ್ಟು ವರ್ಷ ಮಾಡಿದ್ದು ಬೆಟ್ಟಕ್ಕೆ ಮಣ್ಣು ಹೊತ್ತ ಹಾಗಾಯಿತು ನೋಡಿ’’ ಎನ್ನುತ್ತಾರೆ. ಪ್ರಕೃತಿಯಲ್ಲಿ ಸಹಜ ಬೆಟ್ಟವು ನಿರ್ಮಿತವಾಗಿರುವುದೇ ಮಣ್ಣಿನಿಂದ. ಅದಕ್ಕೆ ಹೊಸದಾಗಿ ಮಣ್ಣು ಹೊರುವುದರಿಂದ ಏನೂ ಪ್ರಯೋಜನವಿಲ್ಲ. ಒಟ್ಟಿನಲ್ಲಿ ನಿಷ್ಪ್ರಯೋಜಕವಾದ ಕೆಲಸವು ಹುಟ್ಟಿಸುವ ಹತಾಶ ಭಾವವನ್ನು ತುಂಬ ಚಿತ್ರಕವಾಗಿ […]

ಬುತ್ತಿ – ಈ ಪದದೊಳಗ ಎಷ್ಟು ವಿಶೇಷ ಐತಿ!

 `ನೆನಪು ಬಾಳಿನ ಬುತ್ತಿ’ ಎಂದಿದೆ ಒಂದು ಕವಿಮನಸ್ಸು. `ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಬಂದೀತು?’ ಎನ್ನುತ್ತದೆ ಒಂದು ಕನ್ನಡ ಗಾದೆಮಾತು. ಬುತ್ತಿ ಎಂಬುದು ಕನ್ನಡದಲ್ಲಿ ಬಳಕೆಯಲ್ಲಿರುವ ಒಂದು ಪದ. ನಾಮಪದವಾದಾಗ ಅದಕ್ಕೆ “ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ ರೊಟ್ಟಿ ಮೊದಲಾದುದು’’ ಎಂಬ ಅರ್ಥಗಳಿವೆ ಅನ್ನುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟು. ಬುತ್ತಿ ಕ್ರಿಯಾಪದವಾದಾಗ ಆಟದಲ್ಲಿ ತೂರಿ ಬರುವ ಚಿಣ್ಣಿ, ಚೆಂಡು ಮೊದಲಾದುವನ್ನು ಹಿಡಿಯುವುದು ಎಂಬ ಅರ್ಥವಿದೆ. ಉತ್ತರ ಕರ್ನಾಟಕದ ಕೆಲವು […]

Closed system

ಮುಚ್ಚಿಕೊಂಡ ವ್ಯವಸ್ಥೆ – ತನ್ನಾಚೆಗೆ ಇರುವ ಪ್ರಪಂಚದ ಜೊತೆಗೆ ಯಾವುದೇ ಕೊಳುಕೊಡೆಯ ಅಂತರ್‌ಕ್ರಿಯೆಗಳನ್ನು ಇಟ್ಟುಕೊಳ್ಳದ ಒಂದು ವಸ್ತು ಅಥವಾ ಒಂದಕ್ಕಿಂತ ಹೆಚ್ಚು ವಸ್ತುಗಳ ಒಂದು ವ್ಯವಸ್ಥೆ. ಇವು ತಮ್ಮತಮ್ಮಲ್ಲಿ ಅಂತರ್‌ಕ್ರಿಯೆ ನಡೆಸಿದರೂ ಹೊರಪ್ರಪಂಚದ ಜೊತೆಗೆ ಯಾವ ಕ್ರಿಯೆಯನ್ನೂ ನಡೆಸುವುದಿಲ್ಲ.

Close packing

ಒತ್ತೊತ್ತಾದ ಜೋಡಣೆ – ಕನಿಷ್ಠ ಸ್ಥಳಾವಕಾಶದೊಳಗೆ ಹಿಡಿಸುವಂತೆ ಗೋಳಗಳನ್ನು ಒತ್ತೊತ್ತಾಗಿ ಜೋಡಿಸುವುದು.

Clinical thermometer

ವೈದ್ಯಕೀಯ ಉಷ್ಣತಾಮಾಪಕ – ದೇಹದ(ರಕ್ತದ) ಉಷ್ಣತೆಯನ್ನು ಅಳೆಯಲು ಬಳಸುವ ಉಷ್ಣತಾಮಾಪಕ. ಪಾದರಸವನ್ನು ಬಳಸಿ ಇದನ್ನು ತಯಾರಿಸುತ್ತಾರೆ.

Cleavage

ಸೀಳು – ಹರಳುಗಳು ತಮ್ಮಲ್ಲಿನ ಪರಮಾಣುಗಳ ಮೇಲ್ಮೈಯುದ್ದಕ್ಕೂ ಸೀಳಿಕೊಳ್ಳುವುದು. ನಯವಾದ ಮೇಲ್ಮೈಯ ರೂಪಣೆಗೆ ಈ ಸೀಳಿಕೆ ಅಗತ್ಯವಾಗಿರುತ್ತದೆ.

Classical Physics

 ಶಾಸ್ತ್ರೀಯ ಭೌತಶಾಸ್ತ್ರ – ಸುಮಾರು ೧೯ನೇ ಶತಮಾನದ ಕೊನೆಯ ತನಕ ಅನುಸರಿಸಲ್ಪಟ್ಟ ಸೈದ್ಧಾಂತಿಕ ಭೌತಶಾಸ್ತ್ರ. ಕ್ವಾಂಟಂ ಸಿದ್ಧಾಂತ(೧೯೦೦) ಮತ್ತು ವಿಶೇಷ ಸಾಪೇಕ್ಷತಾ ಸಿದ್ಧಾಂತದ ಉಗಮದ ತನಕ ಇದನ್ನೇ ಸಂಪೂರ್ಣವಾಗಿ ಅನುಸರಿಸಲಾಗುತ್ತಿತ್ತು.

ಅತ್ತೂ ಕರೆದು ಔತಣ ಹಾಕಿಸಿಕೊಂಡರಂತೆ.

ಕನ್ನಡ ಭಾಷೆಯಲ್ಲಿನ ಒಂದು ಪ್ರಸಿದ್ಧ ಗಾದೆಮಾತಿದು. ಸಮಾರಂಭಗಳಲ್ಲಿ ಆಗಮಿಸಿದವರಿಗೆ ನೀಡುವ ವಿಶೇಷ ಆಹಾರಕ್ಕೆ ಔತಣ ಎನ್ನುತ್ತಾರಲ್ಲವೇ. ಇಂತಹ ಔತಣವು ಸಾಮಾನ್ಯವಾಗಿ ಅಪರೂಪದ್ದೂ, ಅತ್ಯಂತ ರುಚಿಕರವಾದದ್ದೂ ಆಗಿರುತ್ತದೆ. ಈ ರೀತಿಯ ವಿಶೇಷ ಸಂದರ್ಭದ ಊಟಕ್ಕೆ ಅತಿಥೇಯರು ಅಥವಾ ಸಮಾರಂಭದ ಆಯೋಜಕರು ತಮ್ಮಿಚ್ಛೆಯಿಂದ ಆಹ್ವಾನ ನೀಡಿದಾಗ ಅದನ್ನು ಸ್ವೀಕರಿಸಲು ಹೋಗುವುದು ಗೌರವದಿಂದ ಬಾಳುವ, ಬದುಕುವ ಜನರ ರೀತಿಯಾಗಿರುತ್ತದೆ. ಆದರೆ ಔತಣವಿರುವ ಸುದ್ದಿ ಗೊತ್ತಾಗಿ ಅದಕ್ಕೆ ನಮ್ಮನ್ನು ಕರೆಯದಿದ್ದಾಗ, ನಾವು ಅದನ್ನು ಏರ್ಪಡಿಸಿದವರ ಬಳಿ ಹೋಗಿ ನಮ್ಮನ್ನು ಕರೆಯುವಂತೆ ನೇರವಾಗಿ ಅಥವಾ […]

ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ –  ಈ ಸಂಬಂಧ ಹೇಗಿದ್ದರೆ ಚೆನ್ನ?

ಕನ್ನಡ ಅಧ್ಯಾಪಕರಿಗೆ ಎಷ್ಟರ ಮಟ್ಟಿಗೆ ಇಂಗ್ಲಿಷ್ ಬೇಕು? ಅವರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುವ ಶಕ್ತಿ ಇರಬೇಕೇ? ಅವರು ಅನುವಾದದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡರೆ ಸಾಕೇ? ಅವರ ಕನ್ನಡ ಎಷ್ಟರ ಮಟ್ಟಿಗೆ `ಬೆರಕೆಯಿಲ್ಲದ ಕನ್ನಡ’ ಆಗಿರಬೇಕು? ………… ಇಂತಹ ಪ್ರಶ್ನೆಗಳು ಆಗಾಗ ಚರ್ಚೆಗೆ ಬರುವುದುಂಟು. ಇದೇ ಸಂದರ್ಭದಲ್ಲಿ ಎರಡು ವಿಲಕ್ಷಣ ಸಂಗತಿಗಳನ್ನು ನಾವು ಗಮನಿಸಬಹುದು. ೧.    ತಾವು ಕನ್ನಡ ಅಧ್ಯಾಪಕರಾಗಿದ್ದರೂ ತಮ್ಮ ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ತಮ್ಮ ನುಡಿಬೆರಕೆ, ನುಡಿಜಿಗಿತಗಳಿಂದ ತೋರಿಸದಿದ್ದರೆ ತಮ್ಮ ಪ್ರತಿಷ್ಠೆಗೆ ಕುಂದು ಬರುತ್ತದೇನೋ […]

Page 105 of 130

Kannada Sethu. All rights reserved.