Matter

ಮ್ಯಾಟರ್ – ವಸ್ತು – ತನ್ನ ಸಾಮರ್ಥ್ಯದಲ್ಲಿ ದ್ರವ್ಯ ಇರುವ ಯಾವುದೇ ಆದರೂ ಅದು ‘ವಸ್ತು‌’. ಇದಕ್ಕೆ ವಿಶ್ರಾಂತ ದ್ರವ್ಯರಾಶಿ ಇರುತ್ತದೆ.‌

Materialization

ಮೆಟೀರಿಯಲೈಸೇಷನ್ – ವಸ್ತುರೂಪಣೆ – ಐನ್ ಸ್ಟೈನ್ ರ ಸಿದ್ಧಾಂತದ ಪ್ರಕಾರ ಶಕ್ತಿಯು ನೇರವಾಗಿ ವಸ್ತುವಾಗಿ ಪರಿವರ್ತಿತವಾಗುವ ಕ್ರಿಯೆ.

ಕನ್ನಡ ವಚನದ ಸಾಲು – ‘ಮೃದುವಚನವೆ ಸಕಲ ಜಪಂಗಳಯ್ಯಾ’.

ಬಸವಣ್ಣನವರ ಒಂದು ಪ್ರಸಿದ್ಧ ವಚನದ ಮೊದಲ ಸಾಲು ಇದು – ‘ಮೃದುವಚನವೆ ಸಕಲ ಜಪಂಗಳಯ್ಯಾ’. ಈ ಭೂಮಿಯ ಮೇಲೆ ಮಾತು ಎಂಬುದು ತನ್ನ ಅತ್ಯಂತ ಪರಿಷ್ಕೃತ ರೂಪದಲ್ಲಿ ಮನುಷ್ಯ ಜೀವಿಗೆ ಮಾತ್ರ ಲಭ್ಯವಾಗಿರುವ ಒಂದು ವಿಶೇಷ ಸೌಲಭ್ಯ. ಇದನ್ನು ಇನ್ನೊಬ್ಬರಿಗೆ ನೋವಾಗದಂತೆ ಬಳಸುವುದು ಒಂದು ಕಲೆಯೂ ಹೌದು,  ಜವಾಬ್ದಾರಿಯೂ ಹೌದು. ‘ಇನ್ನೊಬ್ಬರನ್ನು ನೋಯಿಸದ ಮೃದುವಾದ ಮಾತು ಎಂಬುದು ದೇವರ ಹೆಸರನ್ನು ಜಪಿಸಿದಷ್ಟು ಶ್ರೇಷ್ಠವಾದುದು’ ಅನ್ನುವ, ವಚನ ಚಳುವಳಿಯ ನಾಯಕಮಣಿಯ ಈ ಉಕ್ತಿಯು ಪರಿಗಣನೀಯವಾದುದು. ಅಲ್ಲವೆ? A line […]

ಸಹ ಲೇಖಕರೊಬ್ಬರು ಬಳಸಿದ ಹೊಸಪದ – ಕುಂಭಕೃಷಿ

ಶಿವರಾಮ ಕಾರಂತ, ಬಿ.ಜಿ.ಎಲ್‌‌. ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಟಿ.ಆರ್.ಅನಂತರಾಮು, ಟಿ.ಜಿ.ಶ್ರೀನಿಧಿ ಮುಂತಾದ  ಕನ್ನಡದ ವಿಜ್ಞಾನ ಲೇಖಕರ ಪಟ್ಟಿಗೆ ಒಂದು ಸಮರ್ಥ ಸೇರ್ಪಡೆ ಎನ್ನಬಹುದಾದ ಒಂದು ಹೆಸರು ಎಚ್.ಎ. ಪುರುಷೋತ್ತಮ ರಾವ್ ಅವರದು. ಕೋಲಾರದ ಈ ಲೇಖಕರು ಈಗಾಗಲೇ ಏಳು ಪರಿಸರ ವಿಜ್ಞಾನ ಕೃತಿಗಳನ್ನು ಪ್ರಕಟಿಸಿ ಕಳೆದ ಭಾನುವಾರ ( 23-08-2026) ದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಎಂಟನೆಯ ಕೃತಿ ‘ಈಚಲ ಗರಿ ಹೆಣಿಗೆ’ ಯನ್ನು ಪ್ರಕಟಿಸಿದರು. ಬಾಲ್ಯದಿಂದಲೂ ಪರಿಸರದ ಬಗ್ಗೆ ಆಸಕ್ತಿ, ಕುತೂಹಲಗಳನ್ನು ಹೊಂದಿದ್ದ […]

Page 2 of 2

Kannada Sethu. All rights reserved.